Advertisement

ಸಂಕಲ್ಪ ಪತ್ರ 2017: BJP ಚುನಾವಣಾ ಪ್ರಣಾಳಿಕೆ, ಜೇಟ್ಲಿ ಬಿಡುಗಡೆ

04:04 PM Dec 08, 2017 | udayavani editorial |

ಅಹ್ಮದಾಬಾದ್‌ : ಮುಂಬರುವ 2017ರ ಗುಜರಾತ್‌ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಇಂದು ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.

Advertisement

“ಸಂಕಲ್ಪ ಪತ್ರ 2017′ ಎಂಬ ಶೀರ್ಷಿಕೆ ಇರುವ ಈ ಪ್ರಣಾಳಿಕೆಯನ್ನು ಕೇಂದ್ರ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅರುಣ್‌ ಜೇಟ್ಲಿ  ಅನಾವರಣಗೊಳಿಸಿದರು.

ಆ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಜೇಟ್ಲಿ , “ಕಾಂಗ್ರೆಸ್‌ ಪಕ್ಷ ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿ ವಿಷಯದಲ್ಲಿ ಸುಳ್ಳು ಭರವಸೆ ನೀಡಿದೆ’ ಎಂದು ಟೀಕಿಸಿದರು. 

“ಗುಜರಾತ್‌ನ ಆರ್ಥಿಕ ಬೆಳವಣಿಗೆ ದರವು ಇಡಿಯ ದೇಶದಲ್ಲೇ ಗರಿಷ್ಠವಾಗಿದೆ; ಕಳೆದ ಐದು ವರ್ಷಗಳಲ್ಲಿ ರಾಜ್ಯವು ಸರಾಸರಿ ಶೇ.10ರ ಪ್ರಗತಿಯನ್ನು ಸಾಧಿಸಿದೆ’ ಎಂದು ಹೇಳಿದ ಜೇಟ್ಲಿ , ಬಿಜೆಪಿ ಆಡಳಿತೆಯ ರಾಜ್ಯವನ್ನು ನಿರಾಧಾರವಾಗಿ ಟೀಕಿಸುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. 

ಇದೇ ಡಿ.4ರಂದು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್‌, ರಾಜ್ಯ ರೈತರಿಗೆ ಪರಿಹಾರ ಮತ್ತು ಬೆಂಬಲ ನೀಡುವುದಕ್ಕೆ ತಾನು ಹೆಚ್ಚಿನ ಒತ್ತು ನೀಡುವುದಾಗಿ ಹೇಳಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next