Advertisement

IL&FS: ಸರಕಾರಿ ಕೊಳ್ಳೆ ಮುಚ್ಚಿ ಹಾಕುತ್ತಿರುವ ಜೇಟ್ಲಿ: ಕಾಂಗ್ರೆಸ್‌

12:02 PM Oct 02, 2018 | udayavani editorial |

ಹೊಸದಿಲ್ಲಿ : IL&FS ಕೇಸಿನಲ್ಲಿ ಸರಕಾರಿ ಕೊಳ್ಳೆಯನ್ನು ಮುಚ್ಚಿ ಹಾಕಲು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು ಹತಾಶ ಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

Advertisement

IL&FS ಪ್ರಕರಣವು ದೇಶದ ಹಣಕಾಸು ರಂಗದ ಬಹುದೊಡ್ಡ ಹಗರಣವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. 

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು ಇತರ ಹಗರಣಗಳಲ್ಲಿ ಮಾಡಿರುವಂತೆ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫಿನಾನ್ಸ್‌ ಸರ್ವಿಸ್‌ (IL&FS) ಪ್ರಕರಣದಲ್ಲೂ ಹಗರಣವನ್ನು ಮುಚ್ಚಿ ಹಾಕುವ ಹತಾಶ ಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್‌ಜೇವಾಲಾ ಆರೋಪಿಸಿದರು. 

“ಇನ್ನೊಂದು ಬಾರಿಯ ಈ ಹಗರಣದಲ್ಲಿ ಮತ್ತೆ ಅದೇ ಮಾತು : ಜವಾಬ್ದಾರಿಯಿಂದ ನುಣುಚಿಕೊಳ್ಳಿ; ಕುಟುಂಬದ ಚಿನ್ನ ಬೆಳ್ಳಿ ಮಾರಿ; ಬಾಲಬಡುಕ ಬಂಡವಾಳಶಾಹಿಗಳನ್ನು ಪಾರು ಮಾಡಿ. ಈ ವರೆಗೆ ಆಗಿರುವ 4M ಕೇಸುಗಳಲ್ಲಿ (ಮಲ್ಯ, ಮೋದಿ ಜೂನಿಯರ್‌ 1 ಮತ್ತು 2, ಮೆಹುಲ್‌ ಭಾಯಿ) ಮಾಡಿರುವಂತೆ ಈ ಹಗರಣದಲ್ಲೂ ಅದನ್ನೇ ಮಾಡಿ’ ಎಂದು ಕಾಂಗ್ರೆಸ್‌ ವ್ಯಂಗ್ಯದಿಂದ  ಟ್ವೀಟ್‌ ಮಾಡಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಹಗರಣಗಳನ್ನು ಪ್ರೀತಿಸುತ್ತಾರೆಯೇ ? ಎಂದು ಪ್ರಶ್ನಿಸಿರುವ ರಾಹುಲ್‌ ಗಾಂಧಿ, ಸಾಲ ಬಾಧಿತ ಐಎಲ್‌ ಆ್ಯಂಡ್‌ ಎಫ್ಎಸ್‌ ಗೆ ಎಲ್‌ಐಸಿ ಮೂಲಕ ನೆರವಾಗುವ ಹುನ್ನಾರವನ್ನು ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next