Advertisement
ನಾಡಿನ ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆ ಬಿಂಬಿಸುವ ಕಲಾ ತಂಡಗಳ ಪ್ರದರ್ಶನ, ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರಗು ನೀಡಿದವು. ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲಿಗೆ ಮೈಸೂರಿನ ಶ್ರೀ ಗೌರಿಶಂಕರ ನಂದೀಧ್ವಜ ಸಂಘ ಹಾಗೂ ಶ್ರೀ ಗುರು ಮಲ್ಲೇಶ್ವರ ನಂದೀಧ್ವಜ ಕಲಾ ತಂಡದ ಜೋಡಿ ನಂದೀಧ್ವಜ ಕುಣಿತ, ವೀರಭದ್ರ ಕುಣಿತ, ನಾದಸ್ವರ, ನಿಶಾನೆ ಮತ್ತು ನೌಪತ್ ಆನೆಗಳು ಸಾಗಿದವು.
Related Articles
Advertisement
ಕಂಗೀಲು ನೃತ್ಯ ಹಾಗೂ ಕೊರಗರ ಮೇಳ, ದಕ್ಷಿಣ ಕನ್ನಡ ಜಿಲ್ಲೆಯ ಕೋಟೆ ಚೆನಯ್ಯ ತುಳುನಾಡ ವೀರರು ಸ್ತಬ್ಧಚಿತ್ರ, ಹೆಜ್ಜೆಮೇಳ, ಧಾರವಾಡ ಜಿಲ್ಲೆಯ ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ ಸ್ತಬ್ಧಚಿತ್ರ, ಗಾರುಡಿ-ಚಿಲಿಪಿಲಿ ಗೊಂಬೆ, ಕರಗನೃತ್ಯ, ವಾರ್ತಾ ಇಲಾಖೆಯ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕುರಿತ ಸ್ತಬ್ಧಚಿತ್ರ, ಅದರ ಹಿಂದೆ ಕೆಎಸ್ಆರ್ಪಿ ತಂಡ, ಇಂಗ್ಲೀಷ್ ಬ್ಯಾಂಡ್ ತಂಡ, ಪೊಲೀಸ್ ಅಶ್ವದಳ ಕೆ.ಎಸ್.ಆರ್.ಪಿ. ಮೌಂಟೆಡ್ ಕಂಪನಿ, ಅದರ ಹಿಂದೆ ಚಿನ್ನದ ಅಂಬಾರಿ ಹೊತ್ತ ಅರ್ಜುನ, ಎಡ-ಬಲಕ್ಕೆ ವರಲಕ್ಷ್ಮೀ-ಕಾವೇರಿ ಆನೆಗಳು ಸಾಗಿದವು.
ಫಿರಂಗಿ ಗಾಡಿ: ಮೈಸೂರು ಅರಮನೆ ವತಿಯಿಂದ ಫಿರಂಗಿ ಗಾಡಿಗಳು, ಕೋಲಾಟ ಹಾಗೂ ಪಟ ಕುಣಿತ, ಗದಗ ಜಿಲ್ಲೆಯ ಮರಗಳ ಮರು ನೆಡುವಿಕೆ, ತಮಟೆ ವಾದನ, ಕಲಬುರ್ಗಿ ಜಿಲ್ಲೆಯ ವಿಮಾನ ನಿಲ್ದಾಣ ಸ್ತಬ್ಧಚಿತ್ರ,ಸುಗ್ಗಿ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಪಿನಾಸಿ ನೃತ್ಯ, ಹಾಸನ ಜಿಲ್ಲೆಯ ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ ಸ್ತಬ್ಧಚಿತ್ರ, ಗೊರವರ ಕುಣಿತ, ಕಾವೇರಿ ನೀರಾವರಿ ನಿಗಮದ ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುವುದು ಸ್ತಬ್ಧಚಿತ್ರ, ಮಹಿಳಾ ಡೊಳ್ಳು ಕುಣಿತ, ಕೋಲಾಟ,
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ-ಬಂಕಾಪುರ ನವಿಲುಧಾಮ ಸ್ತಬ್ಧಚಿತ್ರ, ಝಾಂಜ್ ಪಥಕ್, ಕೋಲಾರ ಜಿಲ್ಲೆಯ ಜಿಪಂ ನಡೆ ಗ್ರಾಮದ ಅಭಿವೃದ್ಧಿಯ ಕಡೆ ಸ್ತಬ್ಧಚಿತ್ರ, ಚಂಡೆಮೇಳ, ಕೊಡಗು ಕತ್ತಿಯಾಟ್, ಕೊಪ್ಪಳ ಜಿಲ್ಲೆಯ ಶ್ರೀಕನಕಾಚಲಮ್ಮನ ಮತ್ತು ಐತಿಹಾಸಿಕ ಬಾವಿ ಕನಕಗಿರಿ ಸ್ತಬ್ಧಚಿತ್ರ, ಹಗಲುವೇಷ-ದಾಲಪಟ-ಪೂಜಾ ಕುಣಿತ, ಮೈಸೂರು ಜಿಲ್ಲಾ ಸ್ವೀಪ್ ಸಮಿತಿಯ ನಮ್ಮ ಮತ ನಮ್ಮ ಹಕ್ಕು ಕುರಿತ ಸ್ತಬ್ಧಚಿತ್ರ, ಉರವಂತಿಕೆ, ತಮಟೆವಾದನ, ಮಂಡ್ಯ ಜಿಲ್ಲೆಗೆ ನಾಲ್ವಡಿಯವರ ಪ್ರಮುಖ ಕೊಡುಗೆ ಕೆಆರ್ಎಸ್ ಅಣೆಕಟ್ಟೆ ಸ್ತಬ್ಧಚಿತ್ರ,
ಕಂಸಾಳೆ, ತಮಟೆ ವಾದನ, ಮೈಸೂರು ಜಿಲ್ಲೆಯ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್, ವೀರಮಕ್ಕಳ ಕುಣಿತ, ಡ್ರಂ ಡೋಲು, ಮಾರಿ ಕುಣಿತ, ರಾಯಚೂರು ಜಿಲ್ಲೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಸಿಂಗಾರಿ ಮೇಳ, ಸಿಂಹನೃತ್ಯ, ಪುಗಡಿ ನೃತ್ಯ, ರಾಮನಗರ ಜಿಲ್ಲೆಯ ಭಕ್ತಿ-ನಂಬಿಕೆ-ಕರಕುಶಲ ಇತಿಹಾಸಗಳ ಸಂಗಮ ಸ್ತಬ್ಧಚಿತ್ರ, ಮರಗಾಲು, ಕತ್ತಿವರಸೆ, ಕರಗನೃತ್ಯ, ಬೇಡರ ನೃತ್ಯ, ಶಿವಮೊಗ್ಗ ಜಿಲ್ಲೆಯ ಬಿದನೂರು ಶಿವಪ್ಪನಾಯಕ ಸ್ತಬ್ಧಚಿತ್ರ. ದಕ್ಷಿಣ ವಲಯ ಕಲಾ ಕೇಂದ್ರ ಒಡಿಶಾ ತಂಡದ ಘೂಮ್ರ, ಅರುಣಾಚಲ ಪ್ರದೇಶ ತಂಡದ ಅಜಿಲ್ಹಾಮ, ತಮಿಳುನಾಡು ತಂಡದ ತಪ್ಪಟಂ, ತುಮಕೂರು ಜಿಲ್ಲೆಯ ಶತಮಾನ ಕಂಡ ಡಾ.ಶಿವಕುಮಾರಸ್ವಾಮಿಗಳು ಸ್ತಬ್ಧಚಿತ್ರ, ಕರಾಟೆ ಪಟುಗಳು,
ಸ್ತಬ್ಧಚಿತ್ರ ಉಪ ಸಮಿತಿಯ ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಿಕೇಂದ್ರೀಕರಣ ಸ್ತಬ್ಧಚಿತ್ರ, ಬಂಟ್ವಾಳದ ಶಾರದ ಆರ್ಟ್ಸ್ ತಂಡದ ನಾಸಿಕ್ ಡೋಲು, ಉಡುಪಿ ಜಿಲ್ಲೆಯ ಪರಶುರಾಮ ಸೃಷ್ಟಿಯ ತುಳುನಾಡು ಸ್ತಬ್ಧಚಿತ್ರ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗ ಹಾಗೂ ಪ್ರವಾಸಿ ತಾಣ ಯಾಣ, ಎನ್ಸಿಸಿ ತಂಡ, ಯಾದಗಿರಿ ಜಿಲ್ಲೆಯ ಬಂಜಾರ ಸಂಸ್ಕೃತಿ ಸ್ತಬ್ಧಚಿತ್ರ, ಗಾರುಡಿ ಗೊಂಬೆ, ಆರೋಗ್ಯ ಇಲಾಖೆಯ ಸ್ತಬ್ಧಚಿತ್ರ, ಕರ್ನಾಟಕ ಬ್ಯಾಂಡ್ ಗಾಡಿ, ಕೇರಳತಂಡದ ಚಂಡೆಮೇಳ, ನಾದಸ್ವರ ಕಲಾತಂಡಗಳು ಪ್ರದರ್ಶನ ನೀಡುತ್ತಾ ಸಾಗಿದವು.