Advertisement

ಬದುಕು ಕೊಟ್ಟ ಜೋಳದ ರೊಟ್ಟಿ!

01:12 PM Apr 19, 2021 | Team Udayavani |

ಉತ್ತರ ಕರ್ನಾಟಕದ ಕಲಬುರಗಿ, ಬೀದರ್‌,ಬಿಜಾಪುರ.. ಇಲ್ಲಿನ ಆಹಾರ ಸಂಸ್ಕೃತಿಯಲ್ಲಿ ರೊಟ್ಟಿಗೆಮೊದಲ ಸ್ಥಾನ. ಇಲ್ಲಿ ಜೋಳದ ರೊಟ್ಟಿ ಹೊರತಾದ ಊಟಅಪಥ್ಯವೇ! ಅದರಲ್ಲೂ ಕಲಬುರಗಿ ಜಿಲ್ಲೆಯ ರೊಟ್ಟಿನಾಡಿನ ಉದ್ದಗಲಕ್ಕೂ ಹೆಸರುವಾಸಿ.

Advertisement

ರೊಟ್ಟಿ ತಯಾರಿಕೆಮತ್ತು ಮಾರಾಟ ಇಲ್ಲಿ ಒಂದು ಉದ್ಯಮವಾಗಿ ಬೆಳೆದಿದೆ.ಆ ಮೂಲಕ ನೂರಾರು ಕುಟುಂಬಗಳ ಹೊಟ್ಟೆಯನ್ನೂತಣ್ಣಗೆ ಇಟ್ಟಿದೆ!. ಕಲಬುರಗಿ ನಗರದಲ್ಲಿ ಕಾಣುವ ಅಗಣಿತರೊಟ್ಟಿ ಕೇಂದ್ರಗಳೇ ಇದಕ್ಕೆ ತಾಜಾ ಸಾಕ್ಷಿ.ಹೆಜ್ಜೆ ಹೆಜ್ಜೆಗೂ ಕಲ್ಬುರ್ಗಿಯ ಮಾಣಿಕೇಶ್ವರಿ ಕಾಲೋನಿ, ಬ್ರಹ್ಮಪುರ,ಶಹಾ ಬಜಾರ್‌, ಹೀಗೆ ನಗರದ ಎಲ್ಲೆಡೆರೊಟ್ಟಿ ತಯಾರಿಸುವ ಕೇಂದ್ರಗಳಿವೆ. ಪ್ರತಿರೊಟ್ಟಿ ಕೇಂದ್ರಗಳಲ್ಲೂ ಖಡಕ್‌ ಮತ್ತುಮೆತ್ತನೆ ರೊಟ್ಟಿ ಸಿಗುತ್ತದೆ.

ಅದರಜತೆಗೆ, ಸಜ್ಜೆ ರೊಟ್ಟಿ, ದಪಾಟಿ, ಚಪಾತಿ,ಶೇಂಗಾ ಹೋಳಿಗೆ, ಶೇಂಗಾ ಹಿಂಡಿ,ಅಗಸಿ ಹಿಂಡಿ, ಕಾರೆಳ್ಳ ಹಿಂಡಿ, ಬಾನದಹಿಟ್ಟು.. ಹೀಗೆ ಹತ್ತಾರು ಆಹಾರದಐಟಂಗಳು ಲಭ್ಯ. ಒಂದು ಅಂದಾಜಿನಪ್ರಕಾರ, ನಗರದಲ್ಲಿ 130-150 ರೊಟ್ಟಿಕೇಂದ್ರಗಳಿವೆ! ಇದರೊಟ್ಟಿಗೆ ಕಿರಾಣಿ ಅಂಗಡಿ,ಹೋಟೆಲ್, ಡಾಬಾ.. ಮುಂತಾದ ಕಡೆಗಳಲ್ಲಿರೊಟ್ಟಿಗಳನ್ನು ಕಡ್ಡಾಯವಾಗಿ ಮಾರುತ್ತಾರೆ!.ಸೀಜನ್‌ನಲ್ಲಿ ಜೋರು..ನಿತ್ಯವೂ ರೊಟ್ಟಿ ಖರೀದಿಸುವ ಗ್ರಾಹಕರು ಇದ್ದೇಇರುತ್ತಾರೆ. ಇದರೊಟ್ಟಿಗೆ ಖಾಯಂ ಮನೆಗಳು, ಕಿರಾಣಿಅಂಗಡಿ, ಹಾಸ್ಟೆಲ್‌ ಸೇರಿ ಪ್ರತಿ ರೊಟ್ಟಿ ಕೇಂದ್ರದಿಂದ ದಿನಕ್ಕೆ250-300 ರೊಟ್ಟಿಗಳು ಖರ್ಚಾಗುತ್ತವೆ.

ಮದುವೆಸೀಜನ್‌, ಎಳ್ಳಮವಾಸೆ, ದೇವರ ಕಾರ್ಯಗಳು..ಮುಂತಾದ ಶುಭ ಸಮಾರಂಭಗಳಲ್ಲಿಯೂ ರೊಟ್ಟಿಗಳಿಗೆಡಿಮ್ಯಾಂಡ್‌ ಇರುತ್ತದೆ.ಬದುಕು ನೀಡಿದೆ..ರೊಟ್ಟಿ ಮಾರಾಟ ಇಲ್ಲಿ ಒಂದುಉದ್ಯಮ ಆಗಿ ಬೆಳೆದಿದೆ. ಹೀಗಾಗಿರೊಟ್ಟಿ ತಯಾರಿಕೆ, ಪ್ಯಾಕಿಂಗ್‌,ಮಾರಾಟದಂಥ ಕೆಲಸಗಳಲ್ಲಿಹಲವರು ತೊಡಗಿಸಿಕೊಂಡಿದ್ದಾರೆ.

ಪ್ರತಿ ರೊಟ್ಟಿ ಕೇಂದ್ರಗಳಲ್ಲಿ ಕಮ್ಮಿಅಂದರೂ ದಿನವೊಂದಕ್ಕೆ ಒಬ್ಬರು150-200 ರೊಟ್ಟಿ ತಟ್ಟುತ್ತಾರೆ. 100 ರೊಟ್ಟಿಗೆ 120ರೂ. ಹಣ ಗಳಿಸುವ ಇವರಿಗೆಇದು ಪಾರ್ಟ್‌ ಟೈಂ ಕೆಲಸ!ಅನೇಕ ರೊಟ್ಟಿ ಕೇಂದ್ರಗಳನ್ನುಮಹಿಳೆಯರೇ ನಿರ್ವಹಣೆಮಾಡುವುದು ವಿಶೇಷ. ರೊಟ್ಟಿತಟ್ಟುವ ಚಾಕಚಕ್ಯತೆ, ಅನುಭವಇರುವ ಮಹಿಳೆಯರಿಗೆ ಸೀಜನ್‌ನಲ್ಲಿ ಬೇಡಿಕೆ ಹೆಚ್ಚು.ಇನ್ನು ರೊಟ್ಟಿ ಆರ್ಡರ್‌ಹಿಡಿದು, ಪೂರೈಸುವ ಕೆಲಸವನ್ನುಪುರುಷರು ಮಾಡುತ್ತಾರೆ.

Advertisement

ದಿನವೊಂದಕ್ಕೆ ಎಲ್ಲಾ ಖರ್ಚುವೆಚ್ಚ ತೆಗೆದು ಒಂದು ಸಾಧಾರಣಾ ರೊಟ್ಟಿಕೇಂದ್ರದಿಂದ ಸರಾಸರಿ 300-350 ರೂ. ನಿವ್ವಳ ಲಾಭಗಳಿಸುತ್ತಾರೆ. ಒಟ್ಟಿನಲ್ಲಿ ನೂರಾರು ಮಹಿಳೆಯರಿಗೆ ರೊಟ್ಟಿಕೇಂದ್ರಗಳು ಬದುಕಿಗೆ ಆಸರೆ ಆಗಿದೆ.ವಿದೇಶಗಳಿಗೂ ಹೋಗುತ್ತದೆ…ರೊಟ್ಟಿ ವ್ಯಾಪಾರ ಕೇವಲ ಕಲಬುರಗಿ ನಗರಕ್ಕಷ್ಟೇಸೀಮಿತ ಆಗಿಲ್ಲ. ಬೆಂಗಳೂರು, ಹೈದ್ರಾಬಾದ್‌, ಬಾಂಬೆಸೇರಿದಂತೆ ರಾಜ್ಯದ ವಿವಿಧ ಮೂಲೆ, ನೆರೆ ರಾಜ್ಯ, ಅಷ್ಟೇಕೆವಿದೇಶಗಳಿಗೂ ಕಳುಹಿಸುತ್ತಾರೆ.

ವಿಶೇಷವಾಗಿ ಖಡಕ್‌ ರೊಟ್ಟಿಗೆ ಸಿಕ್ಕಾಪಟ್ಟೆಮಾರುಕಟ್ಟೆ ಇದೆ. ಅದರಲ್ಲೂ ಕಟ್ಟಿಗೆಒಲೆಯಲ್ಲಿ ಮಾಡಿದ ರೊಟ್ಟಿಗೆ ಫ‌ುಲ್‌ಡಿಮ್ಯಾಂಡ್‌.ಬಹು ಉದ್ಯೋಗ ಮೊದಲಿಗೆ ರೊಟ್ಟಿ ವ್ಯಾಪಾರವೊಂದನ್ನೇನೆಚ್ಚಿಕೊಂಡು ಅನೇಕ ಕುಟುಂಬಗಳಿದ್ದವು.ಆದರೆ, ಇಂದು ದರ ಸಮರದಿಂದಕೆಲವೊಮ್ಮೆ ಹಾಕಿದ ಬಂಡವಾಳಹಿಂದಿರುಗಿ ಬರುವುದೂ ಕಷ್ಟವಾಗಿದೆ.ಹೀಗಾಗಿ ರೊಟ್ಟಿ ಕೇಂದ್ರದ ಮಾಲಿಕರು ಈಉದ್ಯೋಗದ ಜತೆ ಜತೆಗೆ ಉಪ ಕಸುಬುಆರಂಭಿಸಿದ್ದಾರೆ. ಹಲವರು ಬೇಗನೆರೊಟ್ಟಿಗಳನ್ನು ಮಾರುವ ಉದ್ದೇಶದಿಂದ,ಕಡಿಮೆ ಬೆಲೆಗೇ ಕೊಟ್ಟುಬಿಡುತ್ತಾರೆ.ಇದರಿಂದ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮಆಗುತ್ತಿದೆ.

ಇಂತಹ ದರ ಸಮರ ಆರೋಗ್ಯಕರ ಅಲ್ಲ. ರೊಟ್ಟಿಕೇಂದ್ರಗಳ ಒಕ್ಕೂಟ ಸ್ಥಾಪನೆ ಆಗಿ, ಏಕರೂಪ ದರ ನಿಗದಿಆಗಬೇಕು. ಇದರಿಂದ ರೊಟ್ಟಿ ಕೇಂದ್ರ ಅವಂಬಿತರಬದುಕು ಹಸನಾಗುತ್ತದೆ..’ ಎನ್ನುತ್ತಾರೆ ಶರಣಜ್ಯೋತಿರೊಟ್ಟಿ ಕೇಂದ್ರದ ಮಾಲೀಕರಾದ ಸಿದ್ದು ಪಡಶೆಟ್ಟಿ

 

ಸ್ವರೂಪಾನಂದ ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next