Advertisement

ಆರ್ಟ್‌ ಆಫ್ ಕೃಷಿ ಮೇಳ

08:35 PM Feb 21, 2020 | Lakshmi GovindaRaj |

ಬೆಂಗಳೂರು ಐಟಿ ಹಬ್‌ ಹೇಗೋ, ಕೃಷಿಗೂ ಇಲ್ಲಿ “ಹಬ್ಬ’ ನಿರಂತರ. ಈ ಬಾರಿ ಆರ್ಟ್‌ ಆಫ್ ಲಿವಿಂಗ್‌ ವತಿಯಿಂದ “ಶ್ರೀ ಶ್ರೀ ಸಾವಯವ ಕೃಷಿಮೇಳ’, ಮಹಾನಗರದ ಹಸಿರುಪ್ರೀತಿಗೆ ಸಾಕ್ಷಿ ಬರೆಯಲಿದೆ. ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಕಾರ್ಯಕ್ರಮ ಉದ್ಘಾಟಿಸುವರು.

Advertisement

ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ಕೃಷಿ ಸಚಿವ ಬಿ.ಸಿ. ಪಾಟೀಲ್‌, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಪಾಲ್ಗೊಳ್ಳುವರು. ಸಮಾರೋಪದಲ್ಲಿ ಸಿಎಂ ಯಡಿಯೂರಪ್ಪ ಉಪಸ್ಥಿತರಿರುವರು. ವಿಚಾರ ಸಂಕಿರಣ, ದೇಸಿ ಬೆಳೆ ತಳಿಗಳ ಪ್ರದರ್ಶನ, ತಾರಸಿ ತೋಟ ಬೆಳೆಸುವ ವಿಧಾನ, ಕೃಷಿ ಪ್ರವಾಸೋದ್ಯಮ- ಇತ್ಯಾದಿ ಪ್ರಮುಖ ಆಕರ್ಷಣೆಗಳಿವೆ.

ಎಲ್ಲಿ?: ಆರ್ಟ್‌ ಆಫ್ ಲಿವಿಂಗ್‌ ಅಂತಾರಾಷ್ಟ್ರೀಯ ಕೇಂದ್ರ, ಕನಕಪುರ ರಸ್ತೆ
ಯಾವಾಗ?: ಫೆ.22- 23, ಶನಿ- ಭಾನು, ಬೆ.10.30ರಿಂದ
ಸಂಪರ್ಕ: 6366422974

Advertisement

Udayavani is now on Telegram. Click here to join our channel and stay updated with the latest news.

Next