Advertisement

ಪವನ್‌ ಕುಮಾರ್‌ ಅತ್ತಾವರ ಅವರ 24 ಕಲಾಕೃತಿಗಳ ಪ್ರದರ್ಶನ

02:20 AM Jun 07, 2018 | Team Udayavani |

ಉಡುಪಿ: ಉಡುಪಿಯ ಆರ್ಟಿಸ್ಟ್‌ ಪೋರಂ ವತಿಯಿಂದ ಪವನ್‌ ಕುಮಾರ್‌ ಅತ್ತಾವರ ಅವರ ಏಕವ್ಯಕ್ತಿ ಕಲಾಪ್ರದರ್ಶನ ‘ಅನಿಕೇತನ’ ಜೂ.8ರಂದು  ಸಂಜೆ  5.30ಕ್ಕೆ ಉಡುಪಿ ಅಲಂಕಾರ್‌ ಚಿತ್ರಮಂದಿರದ ಹಿಂಭಾಗದಲ್ಲಿರುವ ದೃಷ್ಟಿ ಗ್ಯಾಲರಿಯಲ್ಲಿ ಆರಂಭಗೊಳ್ಳಲಿದೆ.

Advertisement

ಅಕ್ರಲಿಕ್‌ ಮತ್ತು ತೈಲ ಮಾಧ್ಯಮದ 24 ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು ಕಲಾಪ್ರದರ್ಶನವನ್ನು ಮಂಗಳೂರಿನ ಎಕ್ಸ್‌ಪರ್ಟ್‌ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಟ್‌ನ ಚೇರ್‌ ವೆುನ್‌ ಪ್ರೊ| ನರೇಂದ್ರ ನಾಯಕ್‌ ಉದ್ಘಾಟಿಸಲಿದ್ದಾರೆ. ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಸಿಇಒ ವಿನೋದ್‌ ಕುಮಾರ್‌, ಖ್ಯಾತ ಕಲಾವಿದ ಗಣೇಶ್‌ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಮೇಶ್‌ ರಾವ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರದರ್ಶನವು ಜೂ.9ರಿಂದ 11ರವರೆಗೆ ಬೆಳಗ್ಗೆ 10ರಿಂದ 7ರವರೆಗೆ ಇದೆ. ಕಲಾಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಮಣಿಪಾಲ್‌ ಟೆಕ್ನಾಲಜೀಸ್‌ನ ಪ್ರಾಜೆಕ್ಟ್ ಮ್ಯಾನೇಜರ್‌, ಆರ್ಟಿಸ್ಟ್‌ ಫೋರಂನ ಸದಸ್ಯ ಸತೀಶ್‌ಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಲಾವಿದ ಪವನ್‌ ಕುಮಾರ್‌ ಅತ್ತಾವರ ಉಪಸ್ಥಿತರಿದ್ದರು.

ಮಂಗಳೂರು ಇನ್ಫೋಸಿಸ್‌ ಉದ್ಯೋಗಿಯಾಗಿರುವ ಪವನ್‌ ಕುಮಾರ್‌ ಅತ್ತಾವರ ಅವರು  ಫೈನ್‌ ಆರ್ಟ್ಸ್ನಲ್ಲಿ ಪದವೀಧರರು, ಅಡ್ವಾನ್ಸ್‌ಡ್‌ ಕಂಪ್ಯೂಟರ್‌ ಆರ್ಟ್ಸ್ನಲ್ಲಿ ಸ್ನಾತಕೋತ್ತರ ಪದವೀಧರರು. 2007ರಲ್ಲಿ ಪುಣೆಯ ರುದ್ರಾಕ್ಷ್ ಆರ್ಟ್‌ ಗ್ಯಾಲರಿಯಲ್ಲಿ ಏಕಕಲಾ ಪ್ರದರ್ಶನ ನೀಡಿದ್ದರು. ಉಡುಪಿ ಪರ್ಬ, ಮೂಡಬಿದಿರೆಯ ಆಳ್ವಾಸ ಚಿತ್ರಸಿರಿ, ಮೈಸೂರು ದಸರಾ, ಗೋವಾ, ಮಂಗಳೂರು, ಉಡುಪಿ, ಮಣಿಪಾಲ, ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧೆಡೆ ಕಲಾಪ್ರದರ್ಶನ ನೀಡಿದ್ದಾರೆ. ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next