Advertisement

ಸ್ವಚ್ಛ ಭಾರತಕ್ಕೊಂದು ಕಲಾ ಶಿಬಿರ 

08:15 AM Feb 09, 2018 | Team Udayavani |

ಮಂಗಳೂರಿನ ರಾಮಕೃಷ್ಣ ಮಠ ಸ್ವಚ್ಛ ಭಾರತ್‌ ಕಾರ್ಯಕ್ರಮಕ್ಕೆ ಪೂರಕವಾಗಿ ಸ್ವತ್ಛ ಮನಸು ಎಂಬ ಪರಿಕಲ್ಪನೆಯಲ್ಲಿ ದ.ಕ. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಚಿತ್ರ ಬಿಡಿಸುವುದರ ಮೂಲಕ ಮನಸು ಸ್ವತ್ಛವಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾವಿರಾರು ಮಕ್ಕಳ ಚಿತ್ರಗಳು ಬಂದಿದ್ದರೂ 230 ಬಾಲ ಕಲಾವಿದರನ್ನು ಆಯ್ಕೆಮಾಡಿ ಅವರಿಗೆ ಸೃಜನ ಸ್ವತ್ಛತಾ ಕಲಾಮೇಳ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಠದ ಏಕಗಮ್ಯಾನಂದ ಮಹಾರಾಜ್‌ರವರ ನೇತೃತ್ವದಲ್ಲಿ ಹಾಗೂ ಶಿಕ್ಷಕಿ ಲಲಿತಾ ಕಲ್ಕೂರ ಮತ್ತು ರಂಜನ್‌ ಬೆರ್ಲಪ್ಪಾಡಿಯವರ ನಾಯಕತ್ವದಲ್ಲಿ ಈ ಕಲಾಮೇಳ ನಡೆಯಿತು. 16 ಸಂಪನ್ಮೂಲ ವ್ಯಕ್ತಿಗಳು ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡಿದ್ದು ಆಯ್ಕೆಮಾಡಿದ ವಿದ್ಯಾರ್ಥಿಗಳಾಗಿದ್ದ ಕಾರಣ ಕಲಾಭಿವ್ಯಕ್ತಿ ರೂಪದ ಫ‌ಲಿತಾಂಶ ಉತ್ತಮವಾಗಿತ್ತು. ಚಿತ್ರಕಲೆಯ ಜಲವರ್ಣ, ಚಾರ್ಕೊಲ್‌, ಕೊಲಾಜ್‌, ವರ್ಲಿ, ಕಾವಿ, ಪೇಪರ್‌ ಕ್ರಾಫ್ಟ್, ಆವೆಮಣ್ಣಿನ ಕಲಾಕೃತಿ, ಭಾವಚಿತ್ರ ರಚನೆ, ಗಾಳಿಪಟ, ಮಡಿಕೆ ಚಿತ್ತಾರ, ರೇಖಾಚಿತ್ರ, ಮುಖವಾಡ, ಗ್ರೀಟಿಂಗ್ಸ್‌, ವ್ಯಂಗ್ಯಚಿತ್ರ, ಕ್ಯಾರಿಕೇಚರ್‌ ಮುಂತಾದ ಪ್ರಕಾರಗಳನ್ನು ಆಯಾ ವಿಷಯಗಳಲ್ಲಿ ಪರಿಣತರಾದ ಸಂಪನ್ಮೂಲ ಕಲಾವಿದರು ಪ್ರಾತ್ಯಕ್ಷಿತೆ ನೀಡುವ ಮೂಲಕ ತರಬೇತಿ ನೀಡಲಾಗಿತ್ತು.

Advertisement

ಹಿರಿಯ ಕಲಾವಿದರಾದ ಗಣೇಶ್‌ ಸೋಮಾಯಾಜಿ ಮತ್ತು ಪೆರ್ಮುದೆ ಮೋಹನ್‌ ಕುಮಾರ್‌ರವರು ಜಲವರ್ಣ ಚಿತ್ರರಚಿಸುವ ತರಬೇತಿ ನೀಡಿದ್ದು, ಕಲಾವಿದ ದಯಾನಂದ್‌ರವರು ಕರಿ ಬಣ್ಣದಿಂದ ಸುಂದರ ನಿಸರ್ಗ ದೃಶ್ಯ ಚಿತ್ರಗಳನ್ನು ರಚಿಸಬಹುದೆಂದು ಮಾಹಿತಿ ನೀಡಿದರು. ನಗುವಿನ ಸಿಂಚನವಿರುವ ವ್ಯಂಗ್ಯ ಚಿತ್ರಗಳನ್ನು ಜಾನ್‌ ಚಂದನ್‌ರವರು ಚಿತ್ರಿಸಿ ಮಕ್ಕಳಿಂದ ಚಿತ್ರರಚನೆ ಮಾಡಿಸಿದರು. ಸಪ್ನಾ ನೊರೋನ್ಹರವರು ವರ್ಲಿ ಚಿತ್ರ ರಚಿಸಿದರೆ ವೀಣಾ ಶ್ರೀನಿವಾಸ್‌ ಕಾವಿ ಚಿತ್ರಕಲೆಯನ್ನು ಮಾಡಿಸಿರುವರು. ಸುಧೀರ್‌ ಕಾವೂರು ಮುಖವಾಡ ರಚನೆ, ತಾರಾನಾಥ್‌ ಕೈರಂಗಳರವರು ಪೇಪರ್‌ ಕೊಲಾಜ್‌, ಸುಂದರ್‌ ತೋಡಾರ್‌ ಪೇಪರ್‌ ಕ್ರಾಫ್ಟ್, ಶಾಲಿನಿಯವರು ಮಣ್ಣಿನ ಮಡಿಕೆ ಚಿತ್ತಾರ, ವೆಂಕಿ ಪಲಿಮಾರ್‌ ಆವೆಮಣ್ಣಿನ ಕಲಾಕೃತಿ, ಸತೀಶ್‌ರಾವ್‌ ಗಾಳಿಪಟ ರಚನೆ, ಭವನ್‌ ಭಾವಚಿತ್ರ (ಕ್ಯಾರಿಕೇಚರ್‌), ನೇಹಾರಾವ್‌ ಗ್ರೀಟಿಂಗ್ಸ್‌ ಕಾರ್ಡು ತಯಾರಿ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಿದರು. ಮನೆಯಲ್ಲಿ ತ್ಯಾಜ್ಯಗಳೆಂದು ಎಸೆಯುವ ವಸ್ತುಗಳಿಂದಲೇ ಸುಂದರ ಕಲಾಕೃತಿಗಳನ್ನು ರಚಿಸಬಹುದೆಂಬ ಸಂದೇಶದೊಂದಿಗೆ ಸ್ವತ್ಛತಾ ಮನಸು ಎಂಬ ಶಿಬಿರದ ಪರಿಕಲ್ಪನೆಗೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಕಲೆಯೊಂದಿಗೆ ಸ್ವತ್ಛತಾ ಜಾಗೃತಿ ಮೂಡಿಬಂದದ್ದು ವಿಶೇಷವಾಗಿತ್ತು. 

ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next