Advertisement

ಎ. 9: ಅರಸೀಕೆರೆಯಲ್ಲೇ ಶಿವಲಿಂಗೇಗೌಡ ಕೈ ಸೇರ್ಪಡೆ

11:26 PM Apr 03, 2023 | Team Udayavani |

ಬೆಂಗಳೂರು: ಇದೇ ಎ. 9ರಂದು ಕಾಂಗ್ರೆಸ್‌ ಸೇರಲು ನಿರ್ಧರಿಸಿರುವ ಮಾಜಿ ಶಾಸಕ ಶಿವಲಿಂಗೇಗೌಡ ಅಂದು ಕ್ಷೇತ್ರದಲ್ಲಿ ಬೃಹತ್‌ ಸಮಾವೇಶ ಆಯೋಜಿಸಿ “ಕೈ’ ಹಿಡಿಯಲಿದ್ದಾರೆ. ಈ ಮೂಲಕ ಜೆಡಿಎಸ್‌ ನಾಯಕರಿಗೆ ಟಕ್ಕರ್‌ ನೀಡಲು ಮುಂದಾಗಿದ್ದಾರೆ.

Advertisement

ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈ ವಿಷಯ ತಿಳಿಸಿದರು. ಶಿವಲಿಂಗೇಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ. ಇದರ ಮುಹೂರ್ತವನ್ನೂ ಅವರೇ ನಿಗದಿಪಡಿಸಿದ್ದು, ಎ. 9ರಂದು ಅವರ ಕ್ಷೇತ್ರಕ್ಕೆ (ಅರಸೀಕೆರೆ) ಬರಲು ಹೇಳಿದ್ದಾರೆ. ಅದರಂತೆ ಅಲ್ಲಿ ಅಧಿಕೃತ ಸೇರ್ಪಡೆ ಆಗಲಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ ಎಂದರೆ ಹೋರಾಟದ ಸಾಗರ. ಅದಕ್ಕೆ ಸೇರಿಕೊಳ್ಳುತ್ತಿರುವ ಶಾಸಕರು, ಮಾಜಿ ಶಾ ಶಾಸಕರಾಗಿದ್ದವರೂ ಇದ್ದಾರೆ. ಕೆಲವರು ತಮ್ಮ ಅಧಿಕಾರ ಅವಧಿ ಇನ್ನೂ ಇದ್ದರೂ ಕಾಂಗ್ರೆಸ್‌ ಸೇರಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next