Advertisement

ಧರ್ಮಸ್ಥಳ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಭಕ್ತರ ಆಗಮನ

09:59 AM Jul 05, 2021 | Team Udayavani |

ಬೆಳ್ತಂಗಡಿ: ಸರಕಾರ ಅನ್ ಲಾಕ್ ಆದೇಶ ಹೊರಡಿಸಿರುವಂತೆ ಸೋಮವಾರ ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

Advertisement

ನಾಡಿನ ಚತುರ್ದಾನ ಶ್ರೇಷ್ಠ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ನಿರೀಕ್ಷೆಯಂತೆ ಭಕ್ತರು ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕಾಗಿ ಕ್ಷೇತ್ರ ಸಂದರ್ಶಿಸಿದ್ದಾರೆ. ಭಕ್ತರ ಆಗಮನ ನಿರೀಕ್ಷೆಯಂತೆ ರವಿವಾರವೆ ಕ್ಷೇತ್ರದಲ್ಲಿ ಪೂರ್ವಸಿದ್ಧತೆ ನಡೆಸಲಾಗಿತ್ತು. ದೇವಳ, ಆಯಕಟ್ಟುಗಳಲ್ಲಿ ಸ್ಯಾನಿಟೈಜೇಷನ್ ಮಾಡಲಾಗಿದೆ.

ಸೋಮವಾರ ಕೋವಿಡ್ ನಿಯಮದಂತೆ ಅಂತರ ಕಾಯ್ದುಕೊಂಡು ಮಂಜುನಾಥ ಸ್ವಾಮಿ ದರ್ಶನ ಪಡೆದರು. ಲಾಕ್ ಡೌನ್ ನಿಂದಾಗಿ ಎರಡು ತಿಂಗಳು ಮನೆಯಲ್ಲೆ ಕಾಲ ಕಳೆದಿದ್ದ ಭಕ್ತರಿಗೆ ಇದೀಗ ದೇವರ ದರ್ಶನ ಮಾಡುವ ಅವಕಾಶ ಸಿಕ್ಕಂತಾಗಿದೆ.

ತಾಲೂಕಿನ ಬಯಲು ಆಲಯ ಕೊಕ್ಕಡ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಕನ್ಯಾಡಿ ಶ್ರೀ ರಾಮಕ್ಷೇತ್ರ ಸೇರಿದಂತೆ ಭಕ್ತರು ಕಂಡುಬಂದರು.

Advertisement

Udayavani is now on Telegram. Click here to join our channel and stay updated with the latest news.

Next