Advertisement

ಕಾಶ್ಮೀರದಲ್ಲಿ ಸಿಕ್ಕಿಬಿದ್ದ ಉಗ್ರರು ಬಾಯ್ಬಿಟ್ಟರು ಪಾಕ್‌ ನ ಮಹಾ ಸಂಚು

09:56 AM Sep 04, 2019 | keerthan |

ಶ್ರೀನಗರ:  ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಬಂಧಿತರಾದ ಇಬ್ಬರು ಉಗ್ರರು ಪಾಕಿಸ್ಥಾನದ ಮಹಾ ಸಂಚಿನ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಕಾಶ್ಮೀರದ ಒಳಗೆ ಉಗ್ರರನ್ನು ಕಳುಸಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ಥಾನ ತಯಾರಿ ನಡೆಸುತ್ತಿದೆ ಎಂದು ಭಾರತೀಯ ಸೇನೆಗೆ ಉಗ್ರರು ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ.

Advertisement

ಭಾರತೀಯ ಸೇನೆ ಬಂಧಿಸಿದ ಖಲೀಲ್‌ ಅಹಮದ್ ಮತ್ತು ನಜೀಂ ಖೋಕರ್‌ ಎಂಬ ಇಬ್ಬರು ಉಗ್ರರು ಹಲವು ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, ಪಾಕಿಸ್ಥಾನದ ಸೇನೆ ಹಲವು ಉಗ್ರರಿಗೆ ತರಬೇತಿ ನೀಡುತ್ತಿದ್ದು, ಅವರನ್ನು ಭಾರತದ ಗಡಿಯೊಳಗೆ ಕಳುಹಿಸಿ ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದ್ದಾರೆ.‌

ಲಶ್ಕರ್‌ ಸಂಘಟನೆ ತರಬೇತಿ ಪಡೆದ ಏಳು  ಉಗ್ರರನ್ನು ಭಾರತದ ಒಳಗೆ ಕಳುಹಿಸಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಖಲೀಲ್‌ ಅಹಮದ್‌ ಮತ್ತು ಖೋಕರ್‌ ಕೂಡಾ ಇದೇ ಗುಂಪಿನ ಉಗ್ರರಾಗಿದ್ದು, ತಂಡದಲ್ಲಿ ಮೂವರು ಅಫ್ಘಾನ್‌ ಪ್ರಜೆಗಳಿದ್ದಾರೆ. ಭಾರತೀಯ ಸೇನೆಯ ಇವರ ಪ್ರಮುಖ ಟಾರ್ಗೆಟ್ ಎಂದು ಹೇಳಿದ್ದಾರೆ.

ಬಂಧಿತ ಇಬ್ಬರೂ ಉಗ್ರರು ಪಾಕಿಸ್ಥಾನದ ಪ್ರಜೆಗಳಾಗಿದ್ದು, ಲಶ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ತರಬೇತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next