Advertisement

Arrested: ಪೋಷಕರ ನಿಂದಿಸಿದ್ದಕ್ಕೆ ನೆರೆಮನೆಯವರಿಗೆ ಜೀವ ಬೆದರಿಕೆ ಹಾಕಿದ್ದವ ಬಂಧನ 

12:20 PM Jan 16, 2024 | Team Udayavani |

ಬೆಂಗಳೂರು:  ಪೋಷಕರನ್ನು ನಿಂದಿಸಿದ ಕಾರಣಕ್ಕೆ ಮಾರಕಾಸ್ತ್ರಗಳಿಂದ ನೆರೆ ಮನೆಯವರಿಗೆ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ವರ್ತೂರು ಪಣತ್ತೂರು ದಿಣ್ಣೆ ನಿವಾಸಿ ಮುತ್ತು ಮುರಳಿ ಅಲಿಯಾಸ್‌ ಮುರಳಿ(27) ಬಂಧಿತ. ಆರೋಪಿ ವಾಟರ್‌ ಟ್ಯಾಂಕರ್‌ ಚಾಲಕನಾಗಿದ್ದಾನೆ. ಭಾನುವಾರ ಸಂಜೆ 6 ಗಂಟೆಗೆ ಆರೋಪಿ ತಂದೆ ಸಂಪಂಗಿ ಮತ್ತು ನೆರೆ ಮನೆಯ ರಾಜಪ್ಪ ಎಂಬವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಎರಡೂ ಕುಟುಂಬದವರ ನಡುವೆ ವಾಗ್ವಾದ ನಡೆದಿದೆ. ಈ ವಿಚಾರವಾಗಿ ಆರೋಪಿ ಮಾರಕಾಸ್ತ್ರ ಹಿಡಿದು ನೆರೆ ಮನೆಯ ರಾಜಪ್ಪ ಕುಟುಂಬದ ಜತೆಗೆ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದ. ಈ ಸಂಬಂಧ ರಾಜಪ್ಪ ನೀಡಿದ ದೂರಿನ ಮೇರೆಗೆ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next