Advertisement

ಸಚಿವ ಲಾಡ್‌ ವಿರುದ್ಧ ಬಂಧನ ವಾರೆಂಟ್‌

11:29 AM May 19, 2017 | Team Udayavani |

ಬೆಂಗಳೂರು: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ  ಸಚಿವ ಸಂತೋಷ್‌ ಲಾಡ್‌ ವಿರುದ್ಧ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದೆ.

Advertisement

ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆ‌ಂಕಟೇಶ್‌, ಸಚಿವ ಸಂತೋಷ್‌ ಲಾಡ್‌ ವಿರುದ್ಧ 2015ರಲ್ಲಿ ಚೆಕ್‌ ಬೌನ್ಸ್‌ ವಂಚನೆ ಸಂಬಂಧ ನೀಡಿದ್ದ ಖಾಸಗಿ ದೂರಿನ ಅನ್ವಯ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ಲಾಡ್‌ ಅಥವಾ ಅವರ ಪರ ವಕೀಲರು ಗುರುವಾರ ಹಾಜರಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ  ನ್ಯಾಯಾಲಯ ಲಾಡ್‌ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿ ಈ ತಿಂಗಳ 22 ರಂದು ಆರೋಪಿಯನ್ನ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿ ವಿಚಾರಣೆ ಮುಂದೂಡಿದೆ. ನಿರ್ಮಾಪಕ ರಾಕ್‌ಲೈನ್‌  ವೆಂಕಟೇಶ್‌ರಿಂದ 2014ರಲ್ಲಿ 6 ಕೋಟಿ ರೂ. ಡಿಡಿ ಪಡೆದುಕೊಂಡಿದ್ದ  ಸಚಿವ ಸಂತೋಷ್‌ ಲಾಡ್‌, ಇದಕ್ಕೆ ಪ್ರತಿಯಾಗಿ ಹಲವು ಚೆಕ್‌ಗಳನ್ನು ನೀಡಿದ್ದರು.

ಆದರೆ ರಾಕ್‌ಲೈನ್‌ ವೆಂಕಟೇಶ್‌, ಲಾಡ್‌ ನೀಡಿದ್ದ ಚೆಕ್‌ಗಳನ್ನು ನಿಗದಿತ ಅವಧಿಯಲ್ಲಿ ಬ್ಯಾಂಕ್‌ ಖಾತೆಗೆ ಹಾಕಿಕೊಂಡರೂ ಎಲ್ಲಾ ಚೆಕ್‌ಗಳು ಬೌನ್ಸ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ಸಂತೋಷ್‌ ಲಾಡ್‌ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next