Advertisement

Bengaluru: ಮೊಬೈಲ್‌ ದೋಚುತ್ತಿದ್ದ ಇಬ್ಬರ ಬಂಧನ

11:46 AM May 27, 2024 | Team Udayavani |

ಬೆಂಗಳೂರು: ಸಾರ್ವಜನಿಕರ ಮೊಬೈಲ್‌ ಕಸಿದು ಪರಾರಿಯಾಗುತ್ತಿದ್ದ ಮಣಿಪುರ ಮೂಲದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮಣಿಪುರ ಮೂಲದ ರಿಯಾಜ್‌ ಖಾನ್‌ (36) ಹಾಗೂ ವಾಸಿಂ ಫಿರೋಜ್‌ (21) ಬಂಧಿತರು. ಆರೋಪಿಗಳಿಂದ 1.5 ಲಕ್ಷ ರೂ. ಮೌಲ್ಯದ 1 ಮೊಬೈಲ್‌, 2 ದ್ವಿಚಕ್ರ ವಾಹನಗಳು, 1 ಸೈಕಲ್‌ ವಶಕ್ಕೆ ಪಡೆಯಲಾಗಿದೆ.

2023ರ ಡಿ.23ರ ರಾತ್ರಿ ಸಿಎಂಆರ್‌ ರಸ್ತೆಯ ಬ್ಯಾಂಕ್‌ವೊಂದರ ಬಳಿ ನಿಂತಿದ್ದ ಅಮ್ಮಾಜಾನ್‌ ಎಂಬವರ ಮೊಬೈಲ್‌ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳು ಠಾಣಾ ವ್ಯಾಪ್ತಿಯ ಸಾರಾಯಿಪಾಳ್ಯದ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರು ಎಂಬುದು ಗೊತ್ತಾಗಿ ಬಂಧಿಸಲಾಗಿದೆ.

ಆರೋಪಿತರ ಪೈಕಿ ರಿಯಾಜ್‌ ಖಾನ್‌ ವಿರುದ್ಧ ಈ ಹಿಂದೆ ಸಿ.ಟಿ. ಮಾರ್ಕೆಟ್‌ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next