Advertisement

Arrest : ಮುಖ್ಯಪೇದೆಗೆ ಚಾಕು ಇರಿದ ಕಳ್ಳನ ಬಂಧನ

02:46 PM Oct 19, 2023 | Team Udayavani |

ಬೆಂಗಳೂರು: ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧಿಸಲು ತೆರಳಿದ್ದ ಸದಾಶಿವನಗರ ಠಾಣೆ ಹೆಡ್‌ಕಾನ್‌ಸ್ಟೆàಬಲ್‌ಗೆ ಕಳ್ಳನೊಬ್ಬ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಈ ಸಂಬಂಧ ಹಸನ್‌ಖಾನ್‌ ಎಂಬಾತನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿ ಕೆಲ ದಿನಗಳ ಹಿಂದೆ ತನ್ನನ್ನು ಬಂಧಿಸಲು ಬಂದಿದ್ದ ಸದಾಶಿವನಗರ ಠಾಣೆಯ ಹೆಡ್‌ಕಾನ್‌ಸ್ಟೆàಬಲ್‌ ಸೈಯದ್‌ ಸಮೀವುಲ್ಲಾ ಎಂಬವರಿಗೆ ಚಾಕುವಿನಿಂದ ಇರಿದಿದ್ದ. ಆರೋಪಿ  ಹಸನ್‌ಖಾನ್‌ ಹಲವು ಅಪರಾಧ  ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಹೀಗಾಗಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕೆಲ ದಿನಗಳ ಹಿಂದೆ ಶಿವಾಜಿನರದ ಎಚ್‌ಕೆಪಿ ದರ್ಗಾ ಸರ್ಕಲ್‌ನ ಸರಕು ಸಾಗಣೆ ಆಟೋ ನಿಲ್ದಾಣದ ಬಳಿ ನಿಂತಿದ್ದ ಹಸನ್‌ಖಾನ್‌ನನ್ನು ಸೈಯದ್‌ ಸಮೀವುಲ್ಲಾ ಬಂಧಿಸಲು ಮುಂದಾಗಿದ್ದಾರೆ. ಆಗ ಆರೋಪಿ ಅವರ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next