Advertisement

Agniveer; ಪರಿಹಾರವಲ್ಲ, ಪಿಂಚಣಿ,ಹುತಾತ್ಮ ಗೌರವ ಕೊಡಿ:ಯೋಧನ ತಂದೆ ಆಗ್ರಹ

12:00 AM Jul 05, 2024 | Team Udayavani |

ಲೂಧಿಯಾನ: ಹುತಾತ್ಮ ಅಗ್ನಿವೀರ ಅಜಯ್‌ ಕುಮಾರ್‌ ಕುಟುಂಬಕ್ಕೆ ಪರಿಹಾರ ನೀಡಿರುವ ವಿಚಾರ ಬಹಳ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಅವರ ಕುಟುಂಬ ಪ್ರತಿಕ್ರಿಯೆ ನೀಡಿದೆ. ಕರ್ತವ್ಯದಲ್ಲಿದ್ದಾಗ ಮಡಿದ ಅಜಯ್‌ಗೆ ಭಾರತೀಯ ಸೇನೆ ಹುತಾತ್ಮನ ಗೌರವ ನೀಡಲಿ. ಪರಿಹಾರ ಧನ ನಮಗೆ ಅಜಯ್‌ರನ್ನು ಮರಳಿ ನೀಡಲ್ಲ ಎಂದಿದ್ದಾರೆ.

Advertisement

ಅಗ್ನಿವೀರ ಯೋಜನೆ ತೆಗೆದುಹಾಕಿ ನಮಗೆ ಪಿಂಚಣಿ ಹಾಗೂ ಕ್ಯಾಂಟೀನ್‌ ಕಾರ್ಡ್‌ ನೀಡಬೇಕೆಂದು ಅಜಯ್‌ ತಂದೆ ಹೇಳಿದ್ದಾರೆ. ಸರಕಾರ ನಮಗೆ 98 ಲಕ್ಷ ರೂ. ಹಣ ನೀಡಿದೆ. ನನ್ನ ಸೋದರ 4 ವರ್ಷದ ಕೆಲಸಕ್ಕಾಗಿ ತನ್ನ ಜೀವ ಕಳೆದುಕೊಂಡಿದ್ದಾನೆ. ಸರಕಾರ 1 ಕೋಟಿ ಪರಿಹಾರದ ಭರವಸೆ ನೀಡಿದ್ದರೂ, ಕುಟುಂಬವು ಅವನಿಲ್ಲದೇ ಕೇವಲ ಹಣದೊಂದಿಗೆ ಬದುಕಲು ಸಾಧ್ಯವೇ ಎಂದು ಅಜಯ್‌ ಸೋದರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next