Advertisement

ಸೇನಾ ಜವಾನ ಅಪಹರಣ ಸುಳ್ಳು; ಆತ ಸುರಕ್ಷಿತ: ರಕ್ಷಣಾ ಸಚಿವಾಲಯ

05:17 AM Mar 09, 2019 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಬಡಗಾಂವ್‌ ನಲ್ಲಿ ಭಯೋತ್ಪಾದಕರು ಸೇನಾ ಜವಾನನೋರ್ವನನ್ನು ಅಪಹರಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ರಕ್ಷಣಾ ಸಚಿವಾಲಯ ಸುಳ್ಳೆಂದು ಹೇಳಿ ಸಷ್ಟನೆ ನೀಡಿದ್ದು, ಆ ಯೋಧನು ಸುರಕ್ಷಿತನಿದ್ದಾನೆ ಎಂದು ಸ್ಪಷ್ಟ ಪಡಿಸಿದೆ.

Advertisement

‘ಭಯೋತ್ಪಾದಕರು ಯೋಧನನ್ನು ಅಪಹರಿಸಿಲ್ಲ; ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ’ ಎಂದು ರಕ್ಷಣಾ ಸಚಿವಾಲಯ ಸುಳ್ಳು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯೆ ನೀಡಿದೆ. 

ಸೇನಾ ಜವಾನ ಮೊಹಮ್ಮದ್‌ ಯಾಸೀನ್‌ ಎಂಬವರನ್ನು ಉಗ್ರರು ಜಮ್ಮು ಕಾಶ್ಮೀರದ ಬಡಗಾಂವ್‌ನ ಛದೂರಾ ಪ್ರದೇಶದ ಕಾಜಿಪೋರದಲ್ಲಿ ಅಪಹರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಸ್ಪಷ್ಟನೆಯಾಗಿ ರಕ್ಷಣಾ ಸಚಿವಾಲಯ, ಯೋಧ ಮೊಹಮ್ಮದ್‌ ಯಾಸೀನ್‌ ಅಪಹೃತರಾಗಿಲ್ಲ; ಅವರು ಸುರಕ್ಷಿತರಿದ್ದಾರೆ ಎಂದು ಹೇಳಿತಲ್ಲದೆ ಈ ರೀತಿಯ ಯಾವುದೇ ಸುಳ್ಳು ವದಂತಿಗಳು ಮತ್ತು ಊಹಾಪೋಹಗಳನ್ನು ನಂಬಬೇಡಿ ಎಂದು ಕೇಳಿಕೊಂಡಿದೆ. 

ಮೊಹಮ್ಮದ್‌ ಯಾಸೀನ್‌ ಅವರು ಜಮ್ಮು ಕಾಶ್ಮೀರದ ಲೈಟ್‌ ಇನ್‌ಫ್ಯಾಂಟ್ರಿ  (ಜೆಎಕೆಎಲ್‌ಐ) ಘಟಕಕ್ಕೆ ಸೇರಿದವರು. ಜೆಎಕೆಎಲ್‌ಐ ಭಾರತೀಯ ಸೇನಾ ಪಡೆಯ ಇನ್‌ಫ್ರಾಂಟ್ರಿ ರೆಜಿಮೆಂಟ್‌ ಆಗಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next