Advertisement

UP ಯಲ್ಲಿ ದೇಸಿ ಪಿಸ್ತೂಲ್‌ ಬದಲು ಸೇನೆ ಶಸ್ತ್ರಾಸ್ತ್ರ ತಯಾರಿಕೆ: ಅಮಿತ್‌ ಶಾ

01:50 AM May 19, 2024 | Team Udayavani |

ಲಲಿತ್‌ಪುರ/ಬಂದಾ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಚಿತ್ರಣ ಬದಲಾಗಿದೆ.

Advertisement

ದೇಸಿ ಪಿಸ್ತೂಲುಗಳನ್ನು ತಯಾರಿಸುತ್ತಿದ್ದ ಹಲವು ಸ್ಥಳಗಳಲ್ಲಿ ದೇಶಕ್ಕೆ ಅಗತ್ಯ ಇರುವ ವಸ್ತು ಉತ್ಪಾದಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಲಲಿತ್‌ಪುರ ಮತ್ತು ಬಂದಾಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಂದೇಲ್‌ಖಂಡ್‌ ಪ್ರದೇಶದಲ್ಲಿ ಅಕ್ರಮವಾಗಿ ದೇಸಿ ಪಿಸ್ತೂಲು ಗಳನ್ನು ತಯಾರಿಸಲಾಗುತ್ತಿತ್ತು. ಈಗ ರಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಮದ್ದುಗುಂಡಗಳನ್ನು ಈ ಪ್ರದೇಶದಲ್ಲಿ ತಯಾರಿಸಲಾಗುತ್ತಿದೆ.
ಪಾಕಿಸ್ಥಾನವೇನಾದರೂ, ನಮ್ಮ ದೇಶದ ಮೇಲೆ ದುಸ್ಸಾಹಸ ನಡೆಸಿದರೆ ಆ ದೇಶದ ವಿರುದ್ಧ ಬುಂದೇಲ್‌ಖಂಡದಲ್ಲಿ ತಯಾರಿಸಿದ ಬಾಂಬ್‌ಗಳನ್ನೇ ಪ್ರಯೋಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಮಾಜವಾದಿ ಪಕ್ಷದ ನೇತೃತ್ವದ ಸರಕಾರದ ಅವಧಿಯಲ್ಲಿ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡು ಹಾರಿಸಲಾಯಿತು. ನರೇಂದ್ರ ಮೋದಿ ಅವಧಿಯಲ್ಲಿ ಅಯೋಧ್ಯೆಯಲ್ಲಿ ಭವ್ಯವಾಗಿರುವ ರಾಮ ಮಂದಿರ ನಿರ್ಮಾಣ ಮಾಡಲಾಯಿತು ಎಂದು ಅಮಿತ್‌ ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next