Advertisement

ಶಸ್ತ್ರಾಸ್ತ್ರ ಕಾಯಿದೆ ಕೇಸು: ಬಿಹಾರ ಮಾಜಿ ಸಚಿವೆ ಪೊಲೀಸರಿಗೆ ಶರಣು

04:07 PM Nov 20, 2018 | udayavani editorial |

ಪಟ್ನಾ : ಶಸ್ತ್ರಾಸ್ತ್ರ ಕಾಯಿದೆ ಕೇಸಿಗೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ಮತ್ತು ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ಅವರು ಬೇಗುಸರಾಯ್‌ ನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

Advertisement

ಮುಜಫ‌ರನಗರ ಆಸರೆ ಮನೆ ರೇಪ್‌ ಆ್ಯಂಡ್‌ ಮರ್ಡರ್‌ ಕೇಸಿನ ತನಿಖೆಯ ವೇಳೆ ಮಂಜು ವರ್ಮಾ ವಿರುದ್ಧದ ಶಸ್ತ್ರಾಸ್ತ್ರ ಕಾಯಿದೆ ಕೇಸು ಬೆಳಕಿಗೆ ಬಂದಿತ್ತು. 

ವಾರದ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಮಂಜು ವರ್ಮಾ ಅವರನ್ನು ಬಂಧಿಸುವಲ್ಲಿನ ವೈಫ‌ಲ್ಯಕ್ಕೆ ಬಿಹಾರ ಪೊಲೀಸ್‌ ದಳವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಇದೇ ನ.27ರಂದು ತನ್ನ ಮುಂದೆ ಹಾಜರಾಗುವಂತೆ ಬಿಹಾರ ಪೊಲೀಸ್‌ ಮಹಾ ನಿರ್ದೇಶಕರಿಗೆ ಸಮನ್ಸ್‌ ಜಾರಿ ಮಾಡಿತ್ತು. ಅದಾಗಿ ಇದೀಗ ಮಂಜು ವರ್ಮಾ ಅವರು ಬೇಗುಸರಾಯ್‌ ನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next