Advertisement

ಕಳಚಿದ ಮಿರಾಶಿ ಮನೆತನದ ಹಿರಿಯ ಕೊಂಡಿ ಗೋಪಾಲ ಅರ್ಜುನ ಮಿರಾಶಿ

12:08 PM Dec 07, 2021 | Team Udayavani |

ದಾಂಡೇಲಿ : ಸತ್ಪುರುಷ ಶ್ರೀ.ದಾಂಡೇಲಪ್ಪ ದೇವಸ್ಥಾನದ ಪ್ರಧಾನ ಅರ್ಚಕರು, ದಾಂಡೇಲಿಯ ಮಿರಾಶಿ ಮನೆತನದ ಹಿರಿಯ ಕೊಂಡಿ ಹಾಗೂ ಶ್ರೀ.ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೋಪಾಲ ಅರ್ಜುನ ಮಿರಾಶಿಯವರು ನಿನ್ನೆ ತಡರಾತ್ರಿ ವಿಧಿವಶರಾದರು. ಮೃತರಿಗೆ 74 ವರ್ಷ ವಯಸ್ಸಾಗಿತ್ತು.

Advertisement

ದಾಂಡೇಲಿಯ ಮಿರಾಶಿ ಮನೆತನದ ಹಿರಿಯ ಕೊಂಡಿ, ಪ್ರಮುಖರು, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದ ಗೋಪಾಲ ಅರ್ಜುನ ಮಿರಾಶಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು.

ಶ್ರೀ.ದಾಂಡೇಲಪ್ಪ ದೇವಸ್ಥಾನದ ಪೂಜಾ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ನಿಷ್ಟೆಯಿಂದ ನಿರ್ವಹಿಸುವುದರ ಮೂಲಕ ದೇವಸ್ಥಾನದ ಪುರೋ ಅಭಿವೃದ್ಧಿಗೆ ಪ್ರಮುಖ ಕಾರಣೀಕರ್ತರಾಗಿದ್ದರು. ಮೃತರು ಮಡದಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶ್ರೀ.ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next