Advertisement

#Me Too:ಶ್ರುತಿ ವಿರುದ್ಧ ಮಾನನಷ್ಟ ಕೇಸ್‌ ದಾಖಲಿಸಿದ ಅರ್ಜುನ್‌ ಸರ್ಜಾ

03:25 PM Oct 25, 2018 | Team Udayavani |

ಬೆಂಗಳೂರು: ಮೀ ಟೂ ಆರೋಪ ಮಾಡಿದ್ದ  ನಟಿ ಶ್ರುತಿ ಹರಿಹರನ್‌ ಅವರ ವಿರುದ್ಧ ನಟ ಅರ್ಜುನ್‌ ಸರ್ಜಾ ಅವರು ಗುರುವಾರ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. 

Advertisement

ಬೆಂಗಳೂರಿನ ಸಿವಿಲ್‌ ಕೋರ್ಟ್‌ನಲ್ಲಿ  ಧ್ರುವ ಸರ್ಜಾ ಮೂಲಕ ಮಾನನಷ್ಟ ಮೊಕದ್ದಮೆ ದಾಖಲು ಮಾಡಿಸಿದ್ದು, 5 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಮನವಿ ಸಲ್ಲಿಸಿದ್ದಾರೆ.

ಅರ್ಜಿ ತುರ್ತು ವಿಚಾರಣೆ ನಡೆಸಿದ ಕೋರ್ಟ್‌ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಶ್ರುತಿ ಹೇಳಿಕೆಗಳಿಗೆ ತಡೆ ನೀಡಬೇಕು ಎಂದು ಸರ್ಜಾ ಮನವಿ ಸಲ್ಲಿಸದ್ದರು. 

ಸೈಬರ್‌ ಕ್ರೈಂ ಠಾಣೆಗೆ ದೂರು 
ಅರ್ಜುನ್‌ ಸರ್ಜಾ ಅವರ ಮ್ಯಾನೇಜರ್‌ ಶಿವಾರ್ಜುನ  ಅವರು ಸೈಬರ್‌ ಕ್ರೈಂ ಠಾಣೆಗೆ ದೂರ ನೀಡಿದ್ದು,ಶ್ರುತಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.   ಸರ್ಜಾ ಅವರ ಟ್ವೀಟರ್‌ ಮತ್ತು ಈ ಮೇಲ್‌ ಖಾತೆ ಹ್ಯಾಕ್‌ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next