Advertisement

ರಸ್ತೆ ಅಪಘಾತ: ಗಾಯಗೊಂಡವರನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಶಿವರಾಮ ಹೆಬ್ಬಾರ್

09:32 PM Apr 22, 2022 | Team Udayavani |

ಯಲ್ಲಾಪುರ: ಮಾರ್ಗಮಧ್ಯೆ ವಾಹನ ಅಪಘಾತಗೊಂಡ ಗಾಯಾಳುವಿಗೆ ಆಸ್ಪತ್ರೆ ಸಾಗಿಸಲು ತಮ್ಮ ಕಾರು ನೀಡಿ ತಾವು ಬೈಕಿನಲ್ಲಿ ಹೋಗಿ ಕೇಂದ್ರ. ಸಚಿವೆ ಶೋಭಾ ಕರಂದ್ಲಾಜೆ ಮಾನವೀಯತೆ ತೋರಿದ ಸಂಗತಿ ಇತ್ತೀಚೆಗಷ್ಟೆ ಸುದ್ದಿಯಾಗಿತ್ತು. ಹಾಗೇ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕೂಡಾ ಇಂತಹುದೇ ಮಾನವೀಯತೆ ಮೆರೆದು ಸುದ್ದಿ ಮಾಡಿದ್ದಾರೆ.

Advertisement

ಶುಕ್ರವಾರ ಕಾರ್ಯಕ್ರಮ ನಿಮಿತ್ತ ಮುಂಡಗೋಡಿಗೆ ಹೋದವರು ಮರಳಿ ಬರುವಾಗ ಯಲ್ಲಾಪುರದ ಹೊರವಲಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಹತ್ತಿರದ ಸಹಸ್ರಳ್ಳಿ ಸಮೀಪ ಗ್ರಾಮ ಪಂಚಾಯತ್ ಸದಸ್ಯ ಸುಭಾಷ್ ಮರಾಠಿ ಎಂಬುವರು ರಸ್ತೆಯಲ್ಲಿ ಗಾಯಗೊಂಡು ಸ್ಥಳೀಯರು ಉಪಚರಿಸುತ್ತಿರುವುದನ್ನು ಕಂಡು ತಕ್ಷಣ ತಮ್ಮ ಕಾರು ನಿಲ್ಲಿಸಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆತ ಸಾವರಿಸಿಕೊಂಡ ನಂತರ ತಮ್ಮ ವಾಹನದಲ್ಲೆ ಆಸ್ಪತ್ರೆಗೆ ಸೇರಿಸುವುದರ ಮೂಲಕ ಮಾನವೀಯತೆ ತೋರಿದರು.

 

Advertisement

Udayavani is now on Telegram. Click here to join our channel and stay updated with the latest news.

Next