Advertisement

Aravind Kejriwal: ಇನ್ನೂ ಕೆಲವು ದಿನ ಕೇಜ್ರಿವಾಲ್‌ಗೆ ತಿಹಾರ್‌ ಜೈಲೇ ಗತಿ!

07:00 PM Jun 25, 2024 | Team Udayavani |

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ  ಕೇಜ್ರಿವಾಲ್‌ (Aravind Kejriwal)ಗೆ ರೋಸ್‌ ಅವೆನ್ಯೂ ಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಮಂಗಳವಾರ ದೆಹಲಿ ಹೈಕೋರ್ಟ್‌ ರದ್ದು ಮಾಡಿದ್ದು ಇದರಿಂದ ಇನ್ನು ಕೆಲವು ದಿನ ತಿಹಾರ್‌ ಜೈಲ್ಲಿನಲ್ಲೇ ಕಾಲ ಕಳೆಯಬೇಕಾಗಿದೆ.

Advertisement

ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ರೋಸ್‌ ಅವೆನ್ಯೂ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುಧೀರ್‌ ಕುಮಾರ್‌ ಜೈನ್‌ ನೇತೃತ್ವದ ಹೈ ಕೋರ್ಟ್‌ ಪೀಠವು  ಅರ್ಜಿಯ ವಿಚಾರಣೆ ನಡೆಸಿ  ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ನೀಡಬಾರದು ಎನ್ನುವ ಉದ್ದೇಶದಲ್ಲಿ ಇ.ಡಿ ಸಲ್ಲಿಸಿರುವ ವಿವರವಾದ ದಾಖಲೆಗಳ ವಿಚಾರಣಾ ಕೋರ್ಟ್‌ ಪರಿಗಣನೆ ಮಾಡಬೇಕಿತ್ತು. ಅದನ್ನು ಪರಿಗಣಿಸದೇ ಜಾಮೀನು ನೀಡಿರುವುದು ತಪ್ಪು ಎಂದು ಹೈ ಕೋರ್ಟ್‌ ಹೇಳಿದೆ.  ಕೇಜ್ರಿವಾಲ್ ಅವರ ಮೇಲಿನ ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶವನ್ನು ಪ್ರಶ್ನಿಸುವ ಬಗ್ಗೆ ಇ.ಡಿ ವಾದಗಳಿಗೆ ಸಂಬಂಧಿಸಿ ಹೈಕೋರ್ಟ್‌ಗೆ ಸರಿಯಾದ ಪರಿಗಣನೆಯ ಅಗತ್ಯವಿದೆ ಎಂದು ಹೇಳಿದರು.

ತೀರ್ಮಾನ ನೀಡುವ ಅಧಿಕಾರವಿಲ್ಲ: 

“ವಿಚಾರಣಾ ಕೋರ್ಟ್ ಯಾವುದೇ ತೀರ್ಮಾನ ನೀಡಬಾರದು, ಇದು ಹೈಕೋರ್ಟ್‌ ತೀರ್ಮಾನಕ್ಕೆ ವಿರುದ್ಧವಾಗಿದೆ. ದಾಖಲೆಗಳು ಮತ್ತು ವಾದಗಳನ್ನು ಸರಿಯಾಗಿ ಪರಿಶೀಲನೆ ಮಾಡಲಾಗಿಲ್ಲ,” ಎಂದು ಪೀಠ ಹೇಳಿದೆ. “ಒಮ್ಮೆ ಅವರ ಬಂಧನವನ್ನು ಪ್ರಶ್ನಿಸುವ ಅವರ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದರೆ, ಕಾನೂನು ಉಲ್ಲಂಘಿಸಿ ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ ಎಂದು ಹೇಳಲಾಗುವುದಿಲ್ಲ” ಎಂದು  ಹೇಳಿದೆ. ನ್ಯಾಯಾಲಯವು ಕೇಜ್ರಿವಾಲ್ ಮತ್ತು ಇಡಿ ಪರ ವಕೀಲರ ವಾದಗಳನ್ನು ಪರಿಗಣಿಸಿ ಈ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next