Advertisement

Excise policy case; ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಜಾಮೀನು ಮಂಜೂರು

12:28 AM Jun 21, 2024 | Team Udayavani |

ಹೊಸದಿಲ್ಲಿ:  ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಗುರುವಾರ ದಿಲ್ಲಿಯ ರೋಸ್‌ ಅವೆನ್ಯೂ ಕೋರ್ಟ್‌ ಜಾಮೀನು ನೀಡಿದೆ. ಶುಕ್ರವಾರ ಕೇಜ್ರಿವಾಲ್‌ ಬಿಡುಗಡೆಯಾಗುವ ಸಾಧ್ಯತೆಗಳಿದೆ.

Advertisement

ವಿಶೇಷ ನ್ಯಾಯಾಧೀಶ ನಿಯಾಯ್‌ ಬಿಂದು ಅವರು ಕೇಜ್ರಿವಾಲ್‌ಗೆ ಷರತ್ತು ಬದ್ಧ ಜಾಮೀನು ಅನುಮೋದಿಸಿದ್ದು, ಶುಕ್ರವಾರ 1ಲಕ್ಷ ರೂ. ಜಾಮೀನು ಬಾಂಡ್‌ ಅನ್ನು ನ್ಯಾಯಪೀಠಕ್ಕೆ ಸಲ್ಲಿಸು ವಂತೆ ಆದೇಶಿಸಿದ್ದಾರೆ. ಜತೆಗೆ ಕೇಜ್ರಿ ವಾಲ್‌ ತನಿಖೆಗೆ ಅಡ್ಡಿಪಡಿಸುವಂತಿಲ್ಲ, ಸಾಕ್ಷಿಗಳ ಮೇಲೆ ಪ್ರಭಾವ ಬೀರು ವಂತಿಲ್ಲ ಎಂದು ಸೂಚಿಸಿದ್ದಾರೆ.

ಜಾಮೀನು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕಾಗಿ ಜಾಮೀನು ಆದೇಶ ಜಾರಿಯನ್ನು 48 ಗಂಟೆಗಳ ವರೆಗೆ ತಡೆಹಿಡಿಯಬೇಕು ಎಂದು ಕೋರಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಮನವಿ ಯನ್ನೂ ನ್ಯಾಯಾಧೀಶರು ತಿರಸ್ಕರಿಸಿ ದ್ದಾರೆ. ದಿಲ್ಲಿ ಮದ್ಯ ನೀತಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮಾ.21ರಂದು ಕೇಜ್ರಿವಾಲ್‌ರನ್ನು ಇ.ಡಿ. ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next