Advertisement

ನಗರಸಭೆ: ಅಧಿಕಾರಿಗಳು ಸದಸ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ

04:07 PM Jun 24, 2023 | Team Udayavani |

ಅರಸೀಕೆರೆ: ನಗರಸಭೆ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಕೆಲವು ಅಧಿಕಾರಿಗಳು ಚುನಾಯಿತ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ನಗರಸಭೆ ಸದಸ್ಯರು ಪಕ್ಷಭೇದ ಮರೆತು ದೂರಿದರು.

Advertisement

ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಸಿ.ಗಿರೀಶ್‌ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯ ವೆಂಕಟಮುನಿ, ಜೆಡಿಎಸ್‌ ಸದಸ್ಯರಾದ ಎಂ.ಸಮೀವುಲ್ಲ, ಜಿ.ಟಿ. ಗಣೇಶ್‌, ಕೆ.ಎಂ.ಈಶ್ವರಪ್ಪ, ಅನ್ನಪೂರ್ಣ, ಮದುರಾ ಹರೀಶ್‌, ಶುಭ ಮನೋಜ್‌, ಪ್ರೇಮಾ ಮಾತನಾಡಿದರು. ನಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ ವ್ಯವಸ್ಥೆ, ಪರಿಸರ ಸ್ವಚ್ಛತೆ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ನಗರಸಭೆ ಸದಸ್ಯರ ಮಾತು ಕೇಳು ತ್ತಿಲ್ಲ. ಫೋನ್‌ ಮಾಡಿದರೂ ಉತ್ತರ ನೀಡಲ್ಲ ಎಂದು ಕಿಡಿಕಾರಿದರು.

ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ: ಇನ್ನೂ ಕುಡಿಯುವ ನೀರು ಸರಬರಾಜಿನ ಮೋಟಾರ್‌ ಗಳು ಪದೆಪದೇ ಕೆಟ್ಟು ಹೋಗುತ್ತಿವೆ ಎಂದು ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದೀರಿ. ನಗರದ ಸ್ವತ್ಛತೆಯಾಗಿ ತಂದಿರುವ ಯಂತ್ರೋಪಕರಣ ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಪದೆ ಪದೇ ಕೆಟ್ಟು ನಿಲ್ಲಲ್ಲು ಯಾರು ಕಾರಣ, ಪ್ರತಿಯೊಂದು ವಾರ್ಡ್‌ಗಳಲ್ಲಿ ಕಸದ ರಾಶಿ ಬಿದ್ದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನು ವಿಲೇವಾರಿ ಮಾಡುವ ಕೆಲಸ ಏಕೆ ಮಾಡ್ತಿಲ್ಲ? ಕೊಳವೆ ಬಾವಿಗಳ ಪಂಪುಗಳು ಕೆಟ್ಟು ಅನೇಕ ತಿಂಗಳು ಕಳೆದಿದೆ. ಯಾವುದನ್ನು ರಿಪೇರಿ ಮಾಡಿಸಿಲ್ಲ. ಪ್ರತಿ ತಿಂಗಳು ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿದೆ. ಆದರೆ ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.

ದಲ್ಲಾಳಿಗಳ ಹಾವಳಿ: ಇ-ಖಾತೆ ಮಾಡಿಸಲು ಅರ್ಜಿ ನೀಡಿ ತಿಂಗಳು ಕಳೆದರೂ ಅಧಿಕಾರಿಗಳು ಮಾಡುತ್ತಿಲ್ಲ. ಅದರೇ ಸಾವಿರಾರು ರೂ.ಹಣ ಮಧ್ಯವರ್ತಿಗಳ ಮೂಲಕ ಸಂದಾಯ ಮಾಡಿದರೇ ಕೆಲವು ದಿನಗಳಲ್ಲಿ ಮಾಡಿಕೊ ಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಪೌರಾಯುಕ್ತರು ಸೂಕ್ತ ಕ್ರಮಕೈಗೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸಮುದಾಯ ಭವನ ರಿಪೇರಿ ಮಾಡಿ: ಪರಿಸರ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ತ್ಯಾಜ್ಯಗಳ ವಿಲೇವಾರಿ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅನೇಕ ವರ್ಷಗಳಿಂದ ಹಾಳು ಬಿದ್ದಿರುವ ನಗರಸಭೆ ಸಮುದಾಯ ಭವನ ದುರಸ್ತಿ ಮಾಡಿ ಸದ್ಬಳಕೆ ಮಾಡಿಕೊಳ್ಳಬೇಕು. ಖಾಸಗಿ ಲೇ ಔಟ್‌ ಮಾಲಿಕರು ಮಾಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ನಗರಸಭೆಯಲ್ಲಿ ಖಾತೆ ಮಾಡಬೇಕು. ರಾಜ ಕಾಲುವೆ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕು. ವಸತಿ ರಹಿತರಿಗೆ ನೀಡಬೇಕಾದ ಜಿ.ಪ್ಲಸ್‌ 1 ಮನೆಗಳನ್ನು ಅತ್ಯಂತ ಶೀಘ್ರದಲ್ಲಿ ಫ‌ಲಾನುಭವಿಗಳಿಗೆ ನೀಡಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದರು.

Advertisement

ಸಮಸ್ಯೆಗೆ ಸಲಹೆ: ಯಾದಾಪುರ ರಸ್ತೆಯಲ್ಲಿನ ಹಮಾಲಿಗಳ ವಸತಿ ಗೃಹಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಂಡು ಅಭಿವೃದ್ಧಿ ಪಡಿಸಬೇಕು. ಜೇನುಕಲ್‌ ನಗರ ಹಾಗೂ ವೃಷಬೇಂದ್ರ ನಗರದಲ್ಲಿ ಈ ಹಿಂದೆ ನಗರಸಭೆ ವತಿಯಿಂದ ವಸತಿ ರಹಿತರಿಗೆ ನೀಡಿದ್ದ ನಿವೇಶನ ಬೇನಾ ಮಿ ಹೆಸರಿನಲ್ಲಿ ಇನ್ನೂ ಖಾಲಿ ಬಿದ್ದಿರುವ ಕಾರಣ ಅವುಗಳ ವಾರಸುದಾರರಿಗೆ ನೋಟಿಸ್‌ ನೀಡಿ ನಂತರ ಕಾನೂನಿನಂತೆ ಕ್ರಮಕೈಗೊ ಂಡು ವಸತಿ ರಹಿತ ಫ‌ಲಾನುಭವಿಗಳಿಗೆ ವಿತರಿಸಲು ತ್ವರಿತವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಯಿಂದ ಸ್ವಲ್ಪ ಹಾನಿಯಾದ ಮನೆಯ ದುರಸ್ತಿಗೆ 90 ಸಾವಿರ ಅನುದಾನ ನೀಡಲಾಗಿದೆ. ಆದರೆ, ಸಂಪೂರ್ಣವಾಗಿ ಹಾಳಾದ ಮನೆಗೆ 50 ಸಾವಿರ ರೂ.ನೀಡಲಾಗಿದೆ. ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸದಸ್ಯ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯರಾದ ಇ.ಎಂ.ರಾಜಶೇಖರ್‌ ಅವರ ಹೆಸರಿನಲ್ಲಿ ಮಾಡಿರುವ ಲೇಔಟ್‌ನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ, ಹಾಗೂ ಉದ್ಯಾನ ವನಕ್ಕೆ ಜಾಗ ಬಿಟ್ಟಿಲ್ಲ. ಆದ್ದರಿಂದ ಖಾತೆ ರದ್ದು ಪಡಿಸಬೇಕು ಎಂದು ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ರಾದ ಸೈಯದ್‌ ಸಿಕಂದರ್‌ ಅರ್ಜಿ ಸಲ್ಲಿಸಿರುವ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಸಮೀವುಲ್ಲ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪೌರಾಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದೂರು ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರಾ? ಉದ್ಯಾನವನದ ಜಾಗ ಅವರು ಬಿಟ್ಟಿಲ್ಲವೇ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲವೇ ಎಂದು ಪ್ರಶ್ನಿಸಿದರು.

ದುರುದ್ದೇಶ ಪೂರಕವಾಗಿ ನೀಡಿರುವ ಅರ್ಜಿಯನ್ನ ಸಭೆಗೆ ತಂದು ಚುನಾಯಿತ ಸದಸ್ಯರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಆಕ್ಷೇಪಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಕಾಂತೇಶ್‌ ಹಾಗೂ ಪೌರಾಯು ಕ್ತರಾದ ಕೇಶವ ಚೌಗಲೆ ವ್ಯವಸ್ಥಾಪಕರಾದ ಕಲಾವತಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next