Advertisement

Aranthodu ಅಪಘಾತ ಸುದ್ದಿಗಳು

09:00 PM Aug 22, 2024 | Team Udayavani |

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Advertisement

ಅರಂತೋಡು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ದೇವರಕೊಲ್ಲಿಯಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬೆಂಗಳೂರಿನ ರಮೇಶ್‌ ಅವರು ಚಲಾಯಿಸುತ್ತಿದ್ದ ಕಾರು ದೇವರಕೊಲ್ಲಿ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಪಲ್ಟಿಯಾಗಿದೆ.

ಕಾರು-ಸ್ಕೂಟಿ ಢಿಕ್ಕಿ; ಸವಾರರಿಗೆ ಗಾಯ

ಅರಂತೋಡು: ಕೋಲ್ಚಾರು ಸಮೀಪ ಕಾರು ಮತ್ತು ಸ್ಕೂಟಿ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟಿ ಸವಾರರಿಗೆ ಗಾಯವಾಗಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

Advertisement

ಸ್ಕೂಟಿ ಸವಾರ ಆಲೆಟ್ಟಿ ಗ್ರಾಮದ ದೀಕ್ಷಿತ್‌ ಕೆ.ಆರ್‌. (29) ಸಹ ಸವಾರ ಶಶಾಂಕ್‌ ಕೆ. ಗಾಯಗೊಂಡವರು.

ಅವರು ಸುಳ್ಯ ಪೇಟೆಗೆ ಸ್ಕೂಟಿಯಲ್ಲಿ ಹೋಗುತ್ತಿರುವಾಗ ಆಲೆಟ್ಟಿ ಗ್ರಾಮದ ಕೋಲ್ಚಾರು ಎಂಬಲ್ಲಿ ಬಂದಡ್ಕ ಕಡೆಯಿಂದ ಸುಳ್ಯ ಕಡೆಗೆ ಬಂದ ಸ್ಯಾಂಟ್ರೋ ಕಾರು ಢಿಕ್ಕಿ ಹೊಡೆದಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕ ಗಣೇಶ ಅವರು ಕೂಡ ಪ್ರತಿದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುಳ್ಯ: ಬಸ್‌ ನಿಲ್ದಾಣದಲ್ಲಿ ಚಾರ್ಜ್‌ಗಿಟ್ಟಿದ್ದ ಮೊಬೈಲ್‌ ಕಳವಿಗೆ ಯತ್ನ
ಸುಳ್ಯ: ಸುಳ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಚಾಜಿಂಗ್‌ ಮಾಡಲು ಇಟ್ಟಿದ್ದ ಮೊಬೆ„ಲ್‌ನ್ನು ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.

ಸುಳ್ಯದ ವಿದ್ಯಾರ್ಥಿಯೋರ್ವ ತನ್ನ ಮೊಬೆ„ಲ್‌ನ್ನು ಸುಳ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಚಾಜಿಂಗ್‌ ಮಾಡಲು ಇಟ್ಟಿದ್ದು, ಈ ವೇಳೆ ಅಲ್ಲಿಗೆ ವ್ಯಕ್ತಿಯೊಬ್ಬ ಬಂದು ಸಂಶಯಾಸ್ಪದವಾಗಿ ನಿಂತುಕೊಂಡಿದ್ದು, ಬಳಿಕ ಚಾರ್ಜ್‌ಗೆ ಇಟ್ಟಿದ್ದ ಮೊಬೆ„ಲ್‌ನ್ನು ಕಳವಿಗೆ ಯತ್ನಿಸಿದ ವೇಳೆ ವಿದ್ಯಾರ್ಥಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕೃತ್ಯ ಎಸಗಲು ಯತ್ನಿಸುತ್ತಿರುವುದನ್ನು ವಿದ್ಯಾರ್ಥಿಗಳನ್ನು ವಿಡಿಯೋ ಚಿತ್ರಿಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next