Advertisement

ಅರಕಲಗೂಡು : ತಾಲೂಕು ಕಚೇರಿಯ ಶೌಚಾಲಯದ ಗುಂಡಿಗೆ ಬಿದ್ದ ವೃದ್ದೆ : ಪ್ರಾಣಾಪಾಯದಿಂದ ಪಾರು

07:36 PM Oct 27, 2021 | Team Udayavani |

ಅರಕಲಗೂಡು : ತಾಲ್ಲೂಕು ಕಚೇರಿ ಆವರಣದಲ್ಲಿರುವ ಶೌಚಾಲಯದ ಗುಂಡಿಗೆ ವೃದ್ದೆಯೊಬ್ಬರು ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

Advertisement

ತಾಲ್ಲೂಕು ಕಚೇರಿ ಆವರಣದಲ್ಲಿರುವ ಶೌಚಾಲಯ ಹಿಂಬದಿಗೆ ಮೂತ್ರ ವಿಸರ್ಜನೆಗೆ ಎಂದು ಕೊಣನೂರು ಹೋಬಳಿ ಅಕ್ಕಲವಾಡಿ ಗ್ರಾಮದ ಲಕ್ಷ್ಮಮ್ಮ ತೆರಳುವಾಗ ಶೌಚಾಲಯದ‌ ಗುಂಡಿ ಮುಚ್ಚದೆ ತೆರದುಕೊಂಡಿದ್ದ ಪರಿಣಾಮ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡು ಶೌಚಾಲಯದ ಗುಂಡಿಯೊಳಗೆ ಕಾಪಾಡಿ‌ ಕಾಪಾಡಿ‌ ಎಂಬ ಶಬ್ದ ಕೇಳಿ ತಾಲ್ಲೂಕು ಕಛೇರಿಯ ಕೆಲಸಕ್ಕೆಂದು ಬಂದಿದ್ದ ಗ್ರಾ.ಪಂ ಸದಸ್ಯ ಅಶೋಕ್ ಎಂಬುವರು ಸ್ಥಳಕ್ಕೆ ಧಾವಿಸಿ ವೃದ್ದೆಯನ್ನು ಕಂಡು ಸಾರ್ವಜನಿಕರ ಸಹಾಯದಿಂದ ಮೇಲೆತ್ತಿ ಅರಕಲಗೂಡು ಸರ್ಕಾರಿ ‌ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ.

ಶೌಚಾಲಯ ನಿರ್ವಹಣೆಯ ಬಗ್ಗೆ ಹಲವು ಬಾರಿ ಮಾಧ್ಯಮದ ಮೂಲಕ ತಹಶಿಲ್ದಾರ್ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ರೀತಿಯಲ್ಲಿ ಶೌಚಾಲಯ ನಿರ್ವಹಣೆ ಮಾಡದ ಕಾರಣ ಈ ಘಟನೆ ಜರುಗಿದೆ.

ಇದನ್ನೂ ಓದಿ :ನಾನು ಕಂಬಳಿ ನೇಯ್ದಿಲ್ಲ, ಆದ್ರೆ ಕುರಿ ಉಣ್ಣೆ ಮಾರಿದ್ದೇನೆ: ಸಿದ್ಧರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next