Advertisement

ಈ ಗಣಪನ ನೋಡಲು ದೊಡ್ಡವರೇ ಬರು”ತಾರೆ’!

12:47 PM Sep 15, 2018 | Team Udayavani |

ಆ ಗಣಪ ಎಷ್ಟು ಹೈಟ್‌ ಇದ್ದಾನೆ? ಅಲ್ಲಿ ಇವತ್ತು ಯಾವ ಸ್ಟಾರ್‌ ಹಾಡು ಹೇಳ್ಳೋಕೆ ಬರ್ತಾರೆ? ಗಣಪನ ವಿಸರ್ಜನೆಗೆ ಎಷ್ಟು ಜನ ಸೇರಿದ್ರಂತೆ?- ಚೌತಿಯ ವೇಳೆ ಬೀದಿಯಲ್ಲಿ ವಿರಾಜಮಾನನಾಗಿ ಕುಳಿತ ಗಣಪನ ಬಗ್ಗೆ ಸಾಮಾನ್ಯವಾಗಿ ನಡೆಯುವ ಚರ್ಚೆ ಇದು. ಬೆಂಗಳೂರಿನಲ್ಲೂ ಇಂಥ ಚರ್ಚೆಗಳು ಸಹಜವಾಗಿ ಕೇಳಿಬರುತ್ತದೆ. ಆದರೆ, ಮಹಾನಗರದ ಜನ ಹೆಚ್ಚು ಚರ್ಚಿಸೋದು ಮಾತ್ರ ಬಸವನಗುಡಿಯ ಗಣೇಶೋತ್ಸವದ ಬಗ್ಗೆ.

Advertisement

  ಯಾಕೆ ಗೊತ್ತಾ? ಇಲ್ಲಿನ ಎಪಿಎಸ್‌ ಕಾಲೇಜಿನ ಮೈದಾನದಲ್ಲಿ ಸ್ಥಾಪಿನಾಗುವ ಗಣಪ ಪ್ರತಿಸಲವೂ ಜೋರು ಸದ್ದು ಮಾಡ್ತಾನೆ! ದೊಡ್ಡ ತಾರೆಗಳು ಇವನೆದುರು ನಿಂತು ಕಾರ್ಯಕ್ರಮಗಳನ್ನು ನಡೆಸಿಕೊಡ್ತಾರೆ. ಅದೇ ರೀತಿ ಈ ಬಾರಿಯೂ ಸ್ಟಾರ್‌ಗಳ ದೊಡ್ಡ ದಂಡು ಈತನನ್ನು ನೋಡಲು ಬರುತ್ತಿದೆ. ಇಲ್ಲಿನ ಪ್ರೇಕ್ಷಕರನ್ನು ರಂಜಿಸಲು ಆಗಮಿಸುತ್ತಿದ್ದಾರೆ.
  ಸೆಪ್ಟೆಂಬರ್‌ 15ರ ಭಾನುವಾರ ರಾಗರಂಜಿನಿ ಸಂಗೀತ ಕಾರ್ಯಕ್ರಮ ಮೊದಲ ದಿನದ ಹೈಲೈಟ್‌. 18ರಂದು ವಿವಿಧ ಕಲಾವಿದರಿಂದ ಹಾಸ್ಯ ಸಂಜೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದೆ. 19ರಂದು ಎಸ್‌.ಪಿ. ಬಾಲಸುಬ್ರಹ್ಮಣ್ಯರ ಹಾಡುಗಾರಿಕೆಯಿಂದ ವೇದಿಕೆ ಕಳೆಗಟ್ಟಲಿದೆ. 21ರಂದು ಬಾಲಿವುಡ್‌ನ‌ ಹಿರಿಯ ತಾರೆ ರಿಷಿಕಪೂರ್‌ ಅವರು ಗಾಯಕ ವಿಜಯ ಪ್ರಕಾಶ್‌ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 22ರಂದು ಹಸ್ಮಿತಾ ಗಣೇಶ್‌ರಿಂದ ಭರತನಾಟ್ಯವಿದ್ದು, ಇದರ ಬಳಿಕ ಸುಪ್ರಸಿದ್ಧ ಗಾಯಕಿ ಶ್ರೇಯಾ ಘೋಶಲ್‌ರಿಂದ ಗಾನಸುಧೆ ಹರಿಯಲಿದೆ. 23ರಂದು ಮತ್ತೆ ಗಾಯಕ ವಿಜಯ್‌ ಪ್ರಕಾಶ್‌ ಆಗಮಿಸಲಿದ್ದು, “ಮ್ಯೂಸಿಕಲ್‌ ನೈಟ್‌’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಎಲ್ಲಿ?: ಎಪಿಎಸ್‌ ಕಾಲೇಜು, ಎನ್‌. ಆರ್‌. ಕಾಲೋನಿ

Advertisement

Udayavani is now on Telegram. Click here to join our channel and stay updated with the latest news.

Next