Advertisement

ಹೊಸಬೆಳಕು: ಅಪ್ಪು ಎರಡು ಕಣ್ಣುಗಳು ನಾಲ್ವರ ಬಾಳಿಗೆ ಬೆಳಕಾದವು !!

01:06 PM Nov 01, 2021 | Team Udayavani |

ಬೆಂಗಳೂರು : ಇಹಲೋಕ ತ್ಯಜಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ ಅವರು ಸೋಮವಾರ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ಭುಜಂಗ ಶೆಟ್ಟಿ ಅವರು, ”ಪುನೀತ್ ಅವರು ದಾನ ಮಾಡಿರುವ 2 ಕಣ್ಣುಗಳಿಂದ ಈಗಾಗಲೇ ನಾಲ್ವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆಗೊಳಗಾದ ನಾಲ್ವರೂ ಕ್ಷೇಮವಾಗಿದ್ದಾರೆ” ಎಂದು ತಿಳಿಸಿದರು.

”ಕಾರ್ನಿಯಾ ಗ್ಲಾಸ್ ನ ಮುಂದಿನ ಗ್ಲಾಸ್ ಅನ್ನು ಒಬ್ಬರಿಗೆ , ಹಿಂದಿನ ಗ್ಲಾಸ್ ಅನ್ನು ಇನ್ನೊಬ್ಬರಿಗೆ ಅಳವಡಿಸಲಾಗಿದೆ. ಹೀಗೆ ನಾಲ್ವರಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಲಾಗಿದೆ ಎಂದು ಡಾ. ಭುಜಂಗ ಶೆಟ್ಟಿ ತಿಳಿಸಿದರು.

‘ಡಾ. ಯತೀಶ್ ಮತ್ತು ತಂಡ ಫುಲ್ ಗ್ಲಾಸ್ ಅನ್ನು 2 ಭಾಗ ಮಾಡಿ ವಿನೂತನ ತಂತ್ರಜ್ಞಾನ ಬಳಸಿ ಶಸ್ತ್ರ ಚಿಕಿತ್ಸೆ ಮಾಡಿದೆ. ಇಂತಹ ಶಸ್ತ್ರ ಚಿಕಿತ್ಸೆಯನ್ನು ರಾಜ್ಯದಲ್ಲೇ ಮೊದಲು ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

ಒಂದೇ ದಿನ ನಾಲ್ವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದು ತಿಳಿಸಿದರು.

Advertisement

ತಂದೆ-ತಾಯಿಯ ಮಾದರಿಯಲ್ಲೇ ಪುನೀತ್ ಅವರು ನೇತ್ರದಾನ ಮಾಡಿ ಆದರ್ಶ ಮೆರೆದಿದ್ದಾರೆ . ಡಾ.ರಾಜ್ ಕುಟುಂಬಕ್ಕೆ ಧನ್ಯವಾದಗನ್ನು ತಿಳಿಸುತ್ತೇನೆ ಎಂದರು.

ಪುನೀತ್ ಅವರ ಕಣ್ಣಿನ ಸ್ಟೆಮ್ ಸೆಲ್ಸ್ ಗಳನ್ನೂ ಸಂಗ್ರಹಿಸಿ ಇಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next