Advertisement

ಬರಪೀಡಿತ 223 ತಾಲೂಕುಗಳಿಗೆ ಅನ್ವಯ- ಈ ಬಾರಿ ಬೇಸಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ

12:54 AM Feb 03, 2024 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದ ಶಾಲೆಗಳಲ್ಲಿ ಈ ಬಾರಿ ಎಪ್ರಿಲ್‌ – ಮೇ ತಿಂಗಳ ಬೇಸಗೆ ರಜೆಯಲ್ಲಿಯೂ ಒಟ್ಟು 41 ದಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆಯಾಗಲಿದೆ.

Advertisement

ಈ ಸಂಬಂಧ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯದ ಪಿಎಂ ಫೋಷಣ್‌ (ಮಧ್ಯಾಹ್ನ ಉಪಾಹಾರ ಯೋಜನೆ) ಅಭಿಯಾನದ ನಿರ್ದೇಶಕರು ಪಿಎಂ ಪೋಷಣ್‌ ವಿಭಾಗದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸಹಾಯಕ ನಿರ್ದೇಶಕರಿಗೆ ಸೂಕ್ತ ಮಾರ್ಗ ಸೂಚಿಗಳೊಂದಿಗೆ ಸೂಚಿಸಿದ್ದಾರೆ.

ಈಗಾಗಲೇ ರಾಜ್ಯ ಸರಕಾರ ಕೇಂದ್ರ ಬರ ನಿರ್ವಹಣೆ ಕೈಪಿಡಿ -2020ರ ಬರ ಘೋಷಣೆ ಮಾರ್ಗಸೂಚಿ ಅನ್ವಯ, ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ ನಡೆಸಿದೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 31 ಜಿಲ್ಲೆಗಳ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬೇಸಗೆ ರಜೆ ದಿನಗಳಲ್ಲಿ ಮಕ್ಕಳಿಗೆ ಬಿಸಿಯೂಟ ವಿತರಿಸಲು ನಿರ್ಧರಿಸಿದೆ.

ಏನಿದು ಯೋಜನೆ?
- ಬರದ ಹಿನ್ನೆಲೆಯಲ್ಲಿ ಬೇಸಗೆಯ ರಜಾದಿನ ಗಳಲ್ಲೂ ಮಧ್ಯಾಹ್ನದ ಬಿಸಿಯೂಟ ವಿತರಣೆ.
- ಮೊದಲು 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ತರಗತಿವಾರು ಸಂಖ್ಯಾಬಲ ನಿಗದಿ. ಅನಂತರ ಬಿಸಿಯೂಟ ಪಡೆಯಲು ಬಯಸುವ ಮಕ್ಕಳಿಂದ ಒಪ್ಪಿಗೆ ಪತ್ರ ಸ್ವೀಕಾರ.

 ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next