Advertisement

ಪ್ರಶಸ್ತಿಗೆ ಅರ್ಜಿ ಆಹ್ವಾನ

10:34 PM Jun 02, 2019 | Team Udayavani |

ಹೊಸಕೋಟೆ: ಭಾರತೀಯ ಮನೋವೈದ್ಯಕೀಯ ಸಂಘದ ವಾರ್ಷಿಕ ಸಮ್ಮೇಳನದ ಅಂಗವಾಗಿ ರಾಜ್ಯದಲ್ಲಿ ಮನೋವೈದ್ಯಕೀಯ ವಿಭಾಗದ ಶೈಕ್ಷಣಿಕ, ಸಮುದಾಯ ಮಾನಸಿಕ ಆರೋಗ್ಯ, ಮಾನಸಿಕ ಆರೋಗ್ಯದ ಅರಿವು, ಮಾದಕ ವ್ಯಸನ ನಿರ್ಮೂಲನೆ, ಮಾನಸಿಕ ಅಸ್ವಸ್ಥರ ಹಾಗೂ ಬುದ್ಧಿ ವಿಕಲಚೇತನರ ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅತ್ಯುನ್ನತ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Advertisement

ವಿವರವಾದ ಮಾಹಿತಿ, ಸಂಸ್ಥೆಯ ವಿವರ, ಅಗತ್ಯ ಪುರಾವೆ, ದಾಖಲೆಗಳೊಂದಿಗೆ ಅರ್ಜಿಯನ್ನು ಜೂ.13ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ www.ipskc.com ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿಗಳನ್ನು ಡಾ.ಸುನೀಲ್‌ಕುಮಾರ್‌ ಪಾಟೀಲ್‌, ಕಾರ್ಯದರ್ಶಿ, ಭಾರತೀಯ ಮನೋವೈದ್ಯಕೀಯ ಸಂಘ-ಕರ್ನಾಟಕ ಅಧ್ಯಾಯ, ಸಂ. 521-ಬಿ, ಗೋದಾವರಿ ಬ್ಲಾಕ್‌, ರಾಷ್ಟ್ರೀಯ ಕ್ರೀಡಾ ಸಮುಚ್ಚಯ, ಕೋರಮಂಗಲ, ಬೆಂಗಳೂರು-560 034ಕ್ಕೆ ಕಳುಹಿಸಬೇಕು ಎಂದು ಅಧ್ಯಕ್ಷ ಡಾ.ಎಚ್‌.ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next