Advertisement

ವಿದೇಶಕ್ಕೆ ತೆರಳಲು ಅನುಮತಿಗೆ ಸಿಎಂ ಅರ್ಜಿ

01:38 AM Mar 16, 2019 | Team Udayavani |

ಬೆಂಗಳೂರು: ಜಂತಕಲ್‌ ಮೈನಿಂಗ್‌ ಅಕ್ರಮ ಆರೋಪ ಪ್ರಕರಣದಲ್ಲಿ ವಿದೇಶಕ್ಕೆ ತೆರಳದಂತೆ ವಿಧಿಸಲಾಗಿರುವ ಜಾಮೀನು ಷರತ್ತನ್ನು ಸಡಿಲಿಸುವಂತೆ ಕೋರಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಕೆಲವು ಅನಿವಾರ್ಯ ಸಂಧರ್ಭಗಳಲ್ಲಿ ವಿದೇಶಕ್ಕೆ ತೆರಳುವ ಅಗತ್ಯವಿರುತ್ತದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಿರುವ ವೇಳೆ ವಿದೇಶಗಳಿಗೆ ತೆರಳದಂತೆ ವಿಧಿಸಲಾಗಿರುವ ಷರತ್ತಿನಿಂದ ವಿನಾಯಿತಿ ನೀಡಬೇಕು ಎಂದು ಕುಮಾರಸ್ವಾಮಿ ಅರ್ಜಿಯಲ್ಲಿ ಕೋರಿದ್ದಾರೆ. ಈ ಅರ್ಜಿ
ವಿಚಾರಣೆಯನ್ನು ನ್ಯಾಯಾಲಯ ಮಾ. 18ಕ್ಕೆ ಮುಂದೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next