Advertisement

ವಿವಿಧ ಬೇಡಿಕೆ ಈಡೇರಿಸಲು ಮನವಿ

03:32 PM May 29, 2022 | Shwetha M |

ಇಂಡಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಂಚಾಯತ್‌ ಅಭಿವೃದ್ಧಿ ಅಧಿ ಕಾರಿಗಳು ಜಿಪಂ ಸಿಇಒ ರಾಹುಲ್‌ ಶಿಂಧೆ ಅವರಿಗೆ ಮನವಿ ಸಲ್ಲಿಸಿದರು.

Advertisement

ಪಿಡಿಒ ಹುದ್ದೆಯಿಂದ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಬಡ್ತಿ ನೀಡಲು ಕ್ರಮ, 2006-07ರಿಂದ 2011-12ರ ವರೆಗೆ ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ತನಿಖೆ ಮಾಡಲು ಲೋಕಾಯುಕ್ತ ವಹಿಸಿರುವ ಪ್ರಕರಣವನ್ನು ವಾಪಸ್‌ ಪಡೆಯಬೇಕು. 8 ವರ್ಷದಿಂದ ನನೆಗುದಿಗೆ ಬಿದ್ದಿರುವ ಪಿಡಿಒ ಹುದ್ದೆಯನ್ನು ಗ್ರೂಪ್‌ ಬಿಗೆ ಮೇಲ್ದರ್ಜೆಗೇರಿಸುವುದು, ಇಲಾಖೆಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ಅಧಿ ಕಾರಿ ಮತ್ತು ನೌಕರರನ್ನು ಕೌನ್ಸೆಲಿಂಗ್‌ ಮಾಡುವ ನಿಯಮ ಕೂಡಲೇ ಜಾರಿಗೆಗೊಳಿಸುವದು, ಪಿಡಿಓ ಹುದ್ದೆ ಯನ್ನು ರಾಜ್ಯಮಟ್ಟದ ವೃಂದವನ್ನಾಗಿಸುವದು ಸೇರಿದಂತೆ ತಮ್ಮ ಹಲವಾರು ಬೇಡಿಕೆ ಈಡೇರಿಸಲು ಮನವಿಯಲ್ಲಿ ಕೋರಿದ್ದಾರೆ.

ಪಿಡಿಒಗಳ ಸಂಘದ ಅಧ್ಯಕ್ಷ ಜಬ್ಟಾರ ಅಲಿ, ಎಸ್‌.ಆರ್‌. ಕಟ್ಟಿ, ರಾಜೇಶ ಗಾಯಕವಾಡ, ಖೂಬಾಸಿಂಗ್‌ ಜಾಧವ, ಎನ್‌.ಎಂ. ಬಿಸ್ತಗೊಂಡ, ಆಯೇಶಾ ಸಾಲೋಟಗಿ, ಜಯಲಕ್ಷ್ಮೀ ದಶವಂತ, ಬಿ.ಎಂ. ಬಬಲಾದ, ಬಸು ಹಳ್ಳಿ, ನಿತ್ಯಾನಂದ ಯಲಗೋಡ, ಬಾಲಸಿಂದ ರಾಠೊಡ, ಸಂಜಯ ದೊಡಮನಿ, ಎಚ್‌.ವಿ. ರಜಪೂತ, ಸಿ.ಜಿ. ಪಾರೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next