Advertisement

ಕಡ್ಡಾಯ ತೇರ್ಗಡೆಗೆ ಸರ್ಕಾರಕ್ಕೆ ಮನವಿ

06:08 AM Jul 08, 2020 | Lakshmi GovindaRaj |

ಬೆಂಗಳೂರು: ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ತರಗತಿಗಳ ವಿದ್ಯಾರ್ಥಿಗಳನ್ನು ಯುಜಿಸಿ ಪ್ರಸ್ತಾವದಂತೆ ಕಡ್ಡಾಯವಾಗಿ ಉತ್ತೀರ್ಣ ಮಾಡುವಂತೆ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯು ಸರ್ಕಾರವನ್ನು ಕೋರಿದೆ. ಪದವಿ  ಕಾಲೇಜುಗಳ ಪರೀಕ್ಷೆ ಸಂಬಂಧಿಸಿದಂತೆ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯು 30 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿತ್ತು. ಮಂಗಳವಾರ ಸಂಸ್ಥೆಯ ಪ್ರತಿನಿಧಿಗಳು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರನ್ನು ಭೇಟಿ ಮಾಡಿ ಸಮೀಕ್ಷಾ ವರದಿ  ಸಲ್ಲಿಸಿದ್ದಾರೆ.

Advertisement

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಈಗಾಗಲೇ ಪ್ರಸ್ತಾಪಿಸಿರುವಂತೆ ಮಧ್ಯಂತರ ವರ್ಷದ ವಿದ್ಯಾರ್ಥಿಗಳನ್ನು (ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರ ತು  ಪಡಿಸಿ) ಕೋವಿಡ್‌-19 ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮುಂದಿನ  ತರಗತಿಗಳಿಗೆ ತೇರ್ಗಡೆ ಮಾಡುವಂತೆ ಮನವಿ ಮಾಡಿದರು. ಪದವಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆ, ಮೌಲ್ಯಮಾಪನ, ಆನ್‌ಲೈನ್‌ ತರಗತಿ ಮತ್ತು ಮುಂದಿನ ಯೋಜನೆಗಳ ಕುರಿತ ಸಮಗ್ರ ವರದಿಯನ್ನು ಸಂಸ್ಥೆಯು ಸರ್ಕಾರಕ್ಕೆ  ಸಲ್ಲಿಸಿದೆ. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಹಳೇ ವಿದ್ಯಾರ್ಥಿಗಳಾದ ಪೃಥ್ವಿ ಹಾಲಪ್ಪ, ಅನಿರುದ ಕುಲಕರ್ಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next