Advertisement

Udupi ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಿಎಂಗೆ ಮನವಿ

11:22 PM Oct 27, 2023 | Team Udayavani |

ಉಡುಪಿ: ವಾರಾಹಿ ಎಡ ದಂಡೆ ಏತ ನೀರಾವರಿ ಕಾಮಗಾರಿ ಸುಮಾರು 10-12 ಕಿ.ಮೀ. ಭಾಗದಲ್ಲಿ ಅರಣ್ಯ ಇಲಾಖೆಯ ಅನುಮತಿ ಕಾರಣಕ್ಕೆ ಸ್ಥಗಿತವಾಗಿದೆ. ವಾರಾಹಿ ನೀರು ಹೆಗ್ಗುಂಜೆ ಗ್ರಾಮದ ಹೊಳೆಯ ಮೂಲಕ ಯಡ್ತಾಡಿ, ಕಾವಡಿ, ಬನ್ನಾಡಿ ಹೊಳೆ ಸೇರಿ ರೈತರಿಗೆ ಸಿಗಬೇಕು. ಈ ಕಾಮಗಾರಿಗೆ ವೇಗ ಸಿಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲೆಯ ರೈತರು ಮನವಿ ಮಾಡಿದ್ದಾರೆ.

Advertisement

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಯಂತ್ರೋಪಕರಣ ಮಾರಾಟದ ಬಗ್ಗೆ ತನಿಖೆ ನಡೆಸಬೇಕು. ಕಾರ್ಖಾನೆಯ ಉಳಿದ ಜಾಗದಲ್ಲಿ ಸರಕಾರಿ ವೈದ್ಯ ಕಾಲೇಜು ಸ್ಥಾಪಿಸಬೇಕು. ಬ್ರಹ್ಮಾವರ ದಲ್ಲಿ ಕೃಷಿ ಡಿಪ್ಲೊಮಾ ಕಾಲೇಜು ಜತೆಗೆ ಕೃಷಿ ವಿ.ವಿ. ಸ್ಥಾಪಿಸಬೇಕು ಎಂದು ಕೃಷಿಕ ಕೆ. ಸತೀಶ್‌ ಕುಮಾರ್‌ ಶೆಟ್ಟಿ ಯಡ್ತಾಡಿ ಮೊದಲಾದರು ಕೋರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next