Advertisement

ಕೃಷಿ ಇಲಾಖೆ ಅಧಿಕಾರಿ ಹಡಪದಗೆ ಮನವಿ

12:20 PM Jun 10, 2020 | Suhan S |

ಕಲಾದಗಿ: ಕೃಷಿ ಇಲಾಖೆಯಲ್ಲಿ ರೈತ ಅನುವುಗಾರರನ್ನು, ತಾಂತ್ರಿಕ ಉತ್ತೇಜಕರಾಗಿ ಕೃಷಿ ಇಲಾಖೆಯಲ್ಲಿ ಮುಂದುವರಿಸಲು ಆಗ್ರಹಿಸಿ ರೈತ ಅನುವುಗಾರರು ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಇಲಾಖೆಯ ಪ್ರಭಾರಿ ಕೃಷಿ ಅಧಿಕಾರಿ ಎಸ್‌.ಆರ್‌. ಹಡಪದ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಸರಕಾರ ಈಗ ಕೃಷಿ ಇಲಾಖೆಯಲ್ಲಿ ರೈತ ಮಿತ್ರ ಎಂದು ಮರು ನಾಮಕರಣ ಮಾಡಿ ಕೃಷಿ ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಚಿಂತನೆ ನಡೆಸಿದ್ದು, ಇದರಿಂದ ರೈತ ಅನುವುಗಾರರು, ತಾಂತ್ರಿಕ ಉತ್ತೇಜಕರಾಗಿ ಕೆಲಸ ಮಾಡಿದವರು ಬದುಕು ಬೀದಿಗೆ ಬಿದ್ದಂತಾಗುತ್ತದೆ. ರೈತ ಮಿತ್ರ ಎಂದು ನೇಮಕಾತಿ ಮಾಡಿಕೊಳ್ಳುವುದನ್ನು ಕೈಬಿಟ್ಟು ವಿವಿಧ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಮನೆ ಬಾಗಿಲಿಗೆ ತಲುಪಿಸಿ ರೈತರ ನೆರವಿಗೆ ಬಂದ ರೈತ ಅನುಗಾರರು, ತಾಂತ್ರಿಕ ಉತ್ತೇಜಕ ಕೃಷಿ ಇಲಾಖೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಬಸನಗೌಡ ಪಾಟೀಲ, ಮಳಿಯಪ್ಪ ಲೆಂಕೆನ್ನವರ, ಮಹಾಂತೇಶ ಗುಡಿ, ಗೋಪಾಲ ಮುಗಳ್ಳೋಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next