Advertisement

Elephant ಹಾವಳಿಗೆ ಪರಿಹಾರಕ್ಕಾಗಿ ಅರಣ್ಯ ಸಚಿವರಿಗೆ ಮನವಿ

11:57 PM Jan 30, 2024 | Team Udayavani |

ಸುಳ್ಯ: ಸಂಪಾಜೆ ಸಹಿತ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ಮಾಡಿ ಕೃಷಿ ನಾಶಪಡಿಸುತ್ತಿದೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಆಗಬೇಕು ಎಂದು ಸಂಪಾಜೆ ಕಾಂಗ್ರೆಸ್‌ ನಿಯೋಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

Advertisement

ದಕ್ಷಿಣ ಕನ್ನಡ ಜಿಲ್ಲೆಗೆ ಎಲಿಫೆಂಟ್‌ ಟಾಸ್ಕ್ಫೋರ್ಸ್‌ ನೇಮಕ ಮಾಡಬೇಕು. ಕೃಷಿಕರಿಗೆ ಈ ಭಾಗದಲ್ಲಿ ಆನೆ ಹಾವಳಿಯಿಂದ ವ್ಯಾಪಕ ಹಾನಿಯಾಗಿದ್ದು ಕೃಷಿ ಹಾನಿಗೆ ಪರಿಹಾರ ಧನ ಒದಗಿಸಬೇಕು. ಸೋಲಾರ್‌ ಬೇಲಿ ನಿರ್ಮಾಣಕ್ಕೆ ಸಹಾಯದನ ಹೆಚ್ಚಳ ಮಾಡಬೇಕು, ಸಂಪಾಜೆ ಗ್ರಾಮದ ಸ್ಮಶಾನ ಜಾಗದ ಸಮಸ್ಯೆಗಳು, ಕಸ ವಿಲೇವಾರಿ ಜಾಗದ ಸಮಸ್ಯೆಗಳು, ದಿನ ನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ಭಯದಲ್ಲಿ ತೇರಳಬೇಕಾದ ಸಮಸ್ಯೆ ಇದ್ದು ಸಚಿವರ ಗಮನಕ್ಕೆ ತರಲಾಯಿತು.

ಮನವಿ ಸ್ವೀಕರಿಸಿದ ಸಚಿವರು ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಕೆಪಿಸಿಸಿ ವಕ್ತಾರ ಟಿ.ಎಂ. ಶಾಹಿದ್‌ ತೆಕ್ಕಿಲ್‌ ನೇತೃತ್ವದಲ್ಲಿ ಸಂಪಾಜೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್‌ ಗೂನಡ್ಕ, ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಸಿದ್ದಿಕ್‌ ಕೊಕ್ಕೋ, ಯುವ ಕಾಂಗ್ರೆಸ್‌ ಮುಖಂಡ ರಂಜಿತ್‌ ರೈಮೇನಾಲ, ಸಲೀಂ ಪೆರುಂಗೋಡಿ, ಉನೈಸ್‌ ಗೂನಡ್ಕ, ಶೌಕತ್‌ ಮೇನಾಲ ಉಪಸ್ಥಿತರಿದ್ದರು. ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೀದ್‌ ಅಕ್ತರ್‌ ಜತೆಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next