Advertisement

ಉದ್ಯೋಗ ಭದ್ರತೆಗೆ ಆಗ್ರಹಿಸಿ ಮನವಿ

05:22 PM Aug 01, 2020 | Suhan S |

ಬೀದರ: ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಮನವಿ ಮಾಡಿದೆ.

Advertisement

ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಗೌತಮ್‌ ಕಸ್ತೂರೆ, ಉಪಾಧ್ಯಕ್ಷ ಉತ್ತಮ ದಂಡೆ ಮತ್ತು ಕಾರ್ಯದರ್ಶಿ ಪರಮೇಶ್ವರ ದುಬಲಗುಂಡೆ ನೇತೃತ್ವದಲ್ಲಿ ಮತ್ತಿತರರು ಡಿಸಿ ಅವರನ್ನು ಭೇಟಿ ಮಾಡಿ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸರ್ಕಾರಕ್ಕೆ ತಗಲುವ ಖರ್ಚಿನಿಂದ ತಪ್ಪಿಸಿಕೊಳ್ಳಲು ನಮ್ಮನ್ನು “ಅರೆಕಾಲಿಕ’, “ಅತಿಥಿ’ ಉಪನ್ಯಾಸಕರು ಎಂದು ಕರೆಯುವ ಅಸಹ್ಯಕರ ಪದ್ಧತಿಚಾಲ್ತಿಯಲ್ಲಿರುವುದು ದುರಂತ. ಸರ್ಕಾರಗಳ ನೀತಿಯಿಂದಾಗಿ  “ಸಮಾನ ಕೆಲಸಕ್ಕೆ ಸಮಾನ ವೇತನ’ ಪಡೆಯುವ ನಮ್ಮ ಸಂವಿಧಾನದ ಹಕ್ಕಿನ ಹರಣವಾಗಿದೆ. ಸರ್ಕಾರಗಳೇ ಈ ನೆಲದ ಕಾನೂನನ್ನು ಗಾಳಿಗೆ ತೂರಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next