Advertisement

ಅಪ್ಪಾಜಿಬೀಡು ಫೌಂಡೇಷನ್‌:24ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

12:20 PM Dec 22, 2017 | Team Udayavani |

ಮುಂಬಯಿ: ವರ್ಲಿ ಪರಿಸರದಲ್ಲಿ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸಿಕೊಂಡು ಬಂದಿರುವ ಪಡುಬಿದ್ರೆ ಬೇಂಗ್ರೆಯ ರಮೇಶ್‌ ಗುರುಸ್ವಾಮಿ ಅವರ ಮಾರ್ಗದರ್ಶನದಲ್ಲಿ 23ವರ್ಷಗಳ ಹಿಂದೆ ಅಯ್ಯಪ್ಪ ಭಕ್ತರನ್ನು ಮತ್ತು ಹಿತೈಷಿ ಬಂಧುಗಳನ್ನು ಒಗ್ಗೂಡಿಸಿಕೊಂಡು ಸ್ಥಾಪಿಸಿರುವ ಅಪ್ಪಾಜಿಬೀಡು ಶ್ರೀ ಅಯ್ಯಪ್ಪ ಭಕ್ತವೃಂದವು ಪ್ರಸ್ತುತ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿಬೀಡು ಎಂಬ ಸರಕಾರಿ ನೋಂದಾ ಯಿತ ಸಂಸ್ಥೆಯಾಗಿ ರೂಪುಗೊಂಡು ಡಿ. 24 ರಂದು ದಿನಪೂರ್ತಿ ಶ್ರದ್ಧಾಭಕ್ತಿ ಸಂಗಮದೊಂದಿಗೆ ಮಹಾಪೂಜೆ ನೆರವೇರಲಿದೆ.

Advertisement

ವರ್ಲಿಯ ಮಧುಸೂದನ ಮಿಲ್‌ ಆವರಣದಲ್ಲಿ ರುವ ಶ್ರೀ ಸಿದ್ಧೇಶ್ವರ ಸ್ವಾಮಿ ಮಂದಿರದಲ್ಲಿ ಶಿಬಿರ ವನ್ನು ಪ್ರಾರಂಭಿಸಿ, 48 ದಿನಗಳ ಕಾಲ ಪ್ರತಿನಿತ್ಯ ಅನ್ನಸಂತರ್ಪಣೆ, ಮಹಾಪೂಜೆಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ವ್ರತಾಚರಣೆ ನಡೆಸುತ್ತಿರುವ ರಮೇಶ್‌ ಗುರುಸ್ವಾಮಿ ಅವರ ನೇತೃತ್ವದಲ್ಲಿ ಡಿ. 24 ರಂದು ಮುಂಜಾನೆ ಶರಣು ಘೋಷದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

ಆನಂತರ ಗಣಹೋಮ, ಅಪ್ಪಾಜಿಬೀಡು ಫೌಂಡೇಷನ್‌ನ ಸದಸ್ಯರಿಂದ ಭಜನೆ, ಮಧ್ಯಾಹ್ನ ಸಹಸ್ರ ಸಂಖ್ಯೆಯಲ್ಲಿ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ಶೃಂಗರಿಸಲ್ಪಟ್ಟ ಮಂಟಪದಲ್ಲಿರಿಸಿದ ಅಪ್ಪಾಜಿಬೀಡಿನ ಒಡೆಯ ಸಿದ್ಧೇಶ್ವರನಿಗೆ ಮತ್ತು ಶಬರಿಗಿರಿವಾಸ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ನಡೆಯಲಿದೆ. ಪೂಜೆಯ ಬಳಿಕ ಆರು ಸಾವಿರ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಧ್ಯಾಹ್ನ 1 ರಿಂದ ಅಪರಾಹ್ನ 4ರವರೆಗೆ ಅನ್ನದಾನ ನಡೆಯಲಿದೆ. ಸಂಜೆ 6 ರಿಂದ 1,118 ದೀಪಗಳಿಂದ ದೀಪೋತ್ಸವ ನಡೆಯಲಿದೆ. 
ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಭಜನ ಕಾರ್ಯಕ್ರಮ ಜರಗಲಿದೆ.

ರಾತ್ರಿ 8 ರಿಂದ ಫೋರ್ಟ್‌ ಅಯ್ಯಪ್ಪ ಸೇವಾ ಸಮಿತಿಯ ಚಂದ್ರಶೇಖರ ಗುರುಸ್ವಾಮಿ ಮತ್ತು ರೇ ರೋಡ್‌ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಜಗನ್ನಾಥ ಗುರುಸ್ವಾಮಿ ಇವರಿಗೆ ಪಾದಪೂಜೆಯ ಮುಖಾಂತರ ಗುರುವಂದನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ರಿಂದ ಪ್ರಸಿದ್ಧ ಕಲ್ಲಡ್ಕ ವಿಠಲ್‌ ನಾಯಕ್‌ ಮತ್ತು ಬಳಗದಿಂದ ಸಂಗೀತದ ರಸಧಾರೆಯೊಂದಿಗೆ  ವಿಶಿಷ್ಟ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ರಾತ್ರಿ ಹರಿವರಾಸನಂ ಮೂಲಕ ಮಂಗಳ ನಡೆಯಲಿದೆ. ಭಕ್ತಾದಿಗಳು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗುವಂತೆ ಫೌಂಡೇಷನ್‌ನ ಆಡಳಿತ ಟ್ರಸ್ಟಿ ಶಾಂಭವಿ ಆರ್‌. ಶೆಟ್ಟಿ ಮತ್ತು ಅಧ್ಯಕ್ಷ ಕೇದಗೆ ಸುರೇಶ್‌ ಶೆಟ್ಟಿ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶ್ವಸ್ಥರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next