Advertisement

Aam Aadmi Party “ಗ್ಯಾರಂಟಿ ‘ ಕದ್ದ ಕಾಂಗ್ರೆಸ್‌: ಮುಖ್ಯಮಂತ್ರಿ ಚಂದ್ರು

10:10 PM Sep 11, 2023 | Team Udayavani |

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ಐದು ಉಚಿತ ಗ್ಯಾರಂಟಿಗಳು ನಮ್ಮ ಪ್ರಣಾಳಿಕೆಯಾಗಿದ್ದವು. ಅವುಗಳನ್ನು ಕದ್ದು ಈಗ ರಾಜ್ಯದ ಜನತೆಗೆ ನೀಡುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಎಎಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ “ಎಲ್ಲಾ ಸೇರೋಣ ಬನ್ನಿ ಮಾತಾಡೋಣ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಯೋಜನೆಗಳನ್ನು ಕದ್ದಿದ್ದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಯಾವ ಪಕ್ಷ ಜನರಿಗೆ ಒಳ್ಳೆಯದು ಮಾಡಿದರೂ ನಮಗೆ ಸಂತೋಷ. ಆದರೆ ಗ್ಯಾರಂಟಿಗಳನ್ನು ಘೋಷಿಸುವ ಮುನ್ನ ಸಾಧಕ-ಬಾಧಕಗಳನ್ನು ಗಮನಿಸಬೇಕಾಗಿತ್ತು. ಗೃಹಲಕ್ಷ್ಮಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಹಣ ತಲುಪುತ್ತಿಲ್ಲ.

ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಿತ್ತು. ಸಮಾಜ ಕಲ್ಯಾಣ ಇಲಾಖೆಗೆ 34 ಸಾವಿರ ಕೋಟಿ ರೂ.ಗಳಲ್ಲಿ 11 ಸಾವಿರ ಕೋಟಿ ರೂ.ಗಳನ್ನು ಸಿಎಂ ಸಿದ್ದರಾಮಯ್ಯ ಉಚಿತ ಯೋಜನೆಗಳಿಗೆ ನೀಡಿರುವುದು ಕಣ್ಣೊರೆಸುವ ತಂತ್ರ. ರಾಜ್ಯದಲ್ಲಿರುವ 14 ಅಕಾಡೆಮಿ, 4 ಅಭಿವೃದ್ಧಿ ಪ್ರಾಧಿ ಕಾರಗಳಿಗೆ ನಯಾಪೈಸೆ ಕೊಟ್ಟಿಲ್ಲ. ನುಡಿದಂತೆ ನಡೆಯದಿರುವುದು, ಸುಳ್ಳು ಹೇಳುತ್ತಿರುವುದೇ ಕಾಂಗ್ರೆಸ್‌ ಸಾಧನೆ. ರಾಜ್ಯದಲ್ಲಿ ಯಾವ ಪ್ರಗತಿಯೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಐದು ಗ್ಯಾರಂಟಿಗಳನ್ನು ಮುಚ್ಚಿಕೊಳ್ಳಲು ಅನುದಾನಗಳನ್ನು ಕಡಿತಗೊಳಿಸಿ ಹಣ ಕೊಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next