Advertisement

6-7ರಂದು ಎಪಿಎಂಸಿ ತರಕಾರಿ ತಾತ್ಕಾಲಿಕ ಮಾರ್ಕೆಟ್‌ ಬಂದ್‌

10:23 AM Jun 06, 2020 | Suhan S |

ಬೆಳಗಾವಿ: ಕೋವಿಡ್‌-19 ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಹಿಂಡಾಲ್ಕೋ ಮತ್ತು ಆರ್‌.ಟಿ.ಓ. ಮೈದಾನಗಳಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಯಿಂದ ಅಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನಾನುಕೂಲವಾಗುತ್ತಿದ್ದು, ವ್ಯಾಪಾರಸ್ಥರು ಮತ್ತು ರೈತರು ಮಾರುಕಟ್ಟೆ ಬಂದ್‌ ಇಡಲು ಸಮಿತಿಗೆ ಸೂಚಿಸಿದ್ದಾರೆ ಎಂದು ಮಾರುಕಟ್ಟೆ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Advertisement

ಕಾರಣ ಜೂನ್‌ 6 ಮತ್ತು 7 ರಂದು ಪೇಟೆ ಕಾರ್ಯಕರ್ತರಿಗೆ ಮತ್ತು ರೈತರಿಗೆ ಅನಾನುಕೂಲ ಉಂಟಾಗದಂತೆ ಹಿಂಡಾಲ್ಕೋ ಮತ್ತು ಆರ್‌.ಟಿ.ಓ. ತರಕಾರಿ ಮಾರುಕಟ್ಟೆಗಳನ್ನು ಬಂದ್‌ ಮಾಡಲು ಸಮಿತಿಯು ತೀರ್ಮಾನಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next