Advertisement

ಎಪಿಎಂಸಿ ಉಪಮಾರುಕಟ್ಟೆ: ಇಂದಿನಿಂದ ಕೃಷಿ ಉತ್ಪನ್ನ ಖರೀದಿ

12:16 AM May 04, 2020 | Sriram |

ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಮಾರುಕಟ್ಟೆಗಳಾದ ಕಡಬ, ನೆಲ್ಯಾಡಿ, ಕಾಣಿಯೂರು, ಆರ್ಲಪದವು, ಉಪ್ಪಿನಂಗಡಿ ಹಾಗೂ ಈಶ್ವರಮಂಗಲ ವ್ಯಾಪ್ತಿಯಲ್ಲಿ ಮೇ 4ರಿಂದ ಕೃಷಿ ಮತ್ತು ಕಾಡುತ್ಪತ್ತಿ ಖರೀದಿ ನಡೆಸಲು ನಿರ್ಧರಿಸಲಾಗಿದೆ.

Advertisement

ಗ್ರಾಮೀಣ ಭಾಗಗಳಲ್ಲಿ ಕಾಡುತ್ಪತ್ತಿ ಹಾಗೂ ಅಡಿಕೆ ಮತ್ತಿತರ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿಯೂ ಮಾರುಕಟ್ಟೆ ಪ್ರವೇಶಕ್ಕೆ ಮಾಸ್ಕ್, ಸಾಮಾಜಿಕ ಅಂತರ ಷರತ್ತು ಅನ್ವಯವಾಗಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ಎಪಿಎಂಸಿ ಅಥವಾ ಸ್ಥಳೀಯಾಡಳಿತದ ಪರವಾನಿಗೆ ಪಡೆದುಕೊಳ್ಳಬೇಕು. ರೈತರು ಅಗತ್ಯಕ್ಕೆ ತಕ್ಕಂತೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಂದಾಗಬೇಕು. ಅಡಿಕೆ ಬೆಳೆಗಾರರು, ಗೇರು ಬೀಜ ಬೆಳೆಗಾರರು, ಕೊಕ್ಕೋ ಬೆಳೆಗಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದವರು ತಿಳಿಸಿದ್ದಾರೆ.

ಗ್ಯಾಸ್‌ ತತ್‌ಕ್ಷಣ ಪಡೆಯಿರಿ
ಉಜ್ವಲ್‌ ಗ್ಯಾಸ್‌ ಸಂಪರ್ಕ ಪಡೆದುಕೊಂಡವರು ಉಚಿತ ಸಿಲಿಂಡರ್‌ ಅನ್ನು ತತ್‌ಕ್ಷಣ ಪಡೆದುಕೊಳ್ಳಬಹುದು. ಈಗಾಗಲೇ ಅದಕ್ಕೆ ಬೇಕಾದಂತಹ ಮೊತ್ತ ಗ್ಯಾಸ್‌ ಏಜೆನ್ಸಿಗಳ ಖಾತೆಗೆ ಜಮೆ ಆಗಿದೆ. ಅನಿಲ ಭಾಗ್ಯ ಯೋಜನೆಯಲ್ಲಿ ಗ್ಯಾಸ್‌ ಸಂಪರ್ಕ ಪಡೆದವರಿಗೂ ಮುಂದಿನ ದಿನಗಳಲ್ಲಿ ಉಚಿತ ಗ್ಯಾಸ್‌ ಸಿಗುವ ವ್ಯವಸ್ಥೆ ಆಗುತ್ತದೆ ಎಂದರು.

ಕಟ್ಟಡ ಕಾರ್ಮಿಕರಿಗೆ ನೆರವು
ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ 2 ಸಾವಿರ ರೂ.ನಂತೆ ಜಮೆ ಮಾಡಲು ಬೇಕಾದ ಮೊತ್ತವನ್ನು ಕಾರ್ಮಿಕ ಇಲಾಖೆ ಖಾತೆಗೆ ರಾಜ್ಯ ಸರಕಾರ ಜಮೆ ಮಾಡಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಬ್ಯಾಂಕ್‌ ಖಾತೆಯನ್ನು ಇಲಾಖೆಗೆ ನೀಡಿದರೆ ಹಣ ಜಮೆ ಮಾಡುತ್ತಾರೆ ಎಂದರು.ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಉಪಸ್ಥಿತರಿದ್ದರು.

Advertisement

ದರ ಏರಿಕೆ: ಎಚ್ಚರಿಕೆ
ಸಿಮೆಂಟ್‌, ಕಬ್ಬಿಣ ಮತ್ತಿತರ ವಸ್ತುಗಳಿಗೆ ತಮಗೆ ಬೇಕಾದಂತೆ ದರ ಹೆಚ್ಚಿಸುವ ವ್ಯಾಪಾರಿಗಳ ಬಗ್ಗೆ ನಿಗಾ ಇಡಲಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಕಾನೂನು ಪ್ರಕಾರ ವ್ಯಾಪಾರಿಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಠಂದೂರು ಅವರು ಎಚ್ಚರಿಕೆ ನೀಡಿದ್ದಾರೆ.

ಮರಳು ನೀತಿ ಸಿದ್ಧ
ರಾಜ್ಯದಲ್ಲಿ ಹೊಸ ಮರಳು ನೀತಿ ಬಗ್ಗೆ ಸಚಿವರು ಭರವಸೆ ನೀಡಿದ್ದರು. ಇದೀಗ ಹೊಸ ಮರಳು ನೀತಿ ಸಿದ್ಧವಾಗಿದೆ. ಈ ಹೊಸ ನೀತಿಗೆ ಮುಖ್ಯಮಂತ್ರಿ ಸಹಿ ಹಾಕಲು ಮಾತ್ರ ಬಾಕಿ ಇದೆ. ಸರಕಾರದಿಂದ ಅಧಿಕೃತ ಆದೇಶ ಕೆಲವೇ ದಿನಗಳಲ್ಲಿ ಬರಲಿದೆ.
– ಸಂಜೀವ ಮಠಂದೂರು
ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next