Advertisement

ಬಿಜೆಪಿಗೆ ಯಾರು ಬೇಕಾದರೂ ಬರಬಹುದು, ಬಂದರೆ ಸ್ವಾಗತಿಸುತ್ತೇವೆ: ಮಾಧುಸ್ವಾಮಿ

12:12 PM Jul 04, 2021 | Team Udayavani |

ಉಡುಪಿ: ಎಲ್ಲಾ ಪಕ್ಷಗಳಿಗೂ ಪಕ್ಷವನ್ನು ವಿಸ್ತರಣೆ ಮಾಡುವ ಆಶಯವಿರುತ್ತದೆ. ಹಾಗೆಯೇ ಡಿಕೆ ಶಿವಕುಮಾರ್ ಹೇಳಿರಬಹುದು. ನಮ್ಮ ಬಿಜೆಪಿ ಪಕ್ಷಕ್ಕೂ  ಯಾರು ಬೇಕಾದರೂ ಬರಲಿ. ಅಲ್ಲಿಯವರು ನಮ್ಮ ಪಕ್ಷಕ್ಕೆ ಬಂದರೆ ನಾವು ಸ್ವಾಗತ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

Advertisement

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ‘ಬೋಗಸ್ ಲಸಿಕೆ’ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಲಸಿಕೆ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ದೂರಿದರೆ ಒಳ್ಳೆಯದಾಗಲ್ಲ. 80 ಕೋಟಿ ಜನರಿಗೆ ಉಚಿತ ಲಸಿಕೆ ಕೊಡುವುದು ಸುಲಭವಲ್ಲ. ಟೀಕೆ ಮಾಡಬೇಕು ಸರಿ, ಆದರೆ ಇದು ನೈಸರ್ಗಿಕ ವಿಪತ್ತು. ಎಲ್ಲರೂ ಒಟ್ಟಾಗಿ ಎದುರಿಸಬೇಕು ಎಂದರು.

ಕೋವಿಡ್ ಲಸಿಕೆಯನ್ನು ದಿಢೀರ್ ಉತ್ಪಾದನೆ ಮಾಡಲು ಆಗುವುದಿಲ್ಲ. ಅದಕ್ಕೂ ಸಮಯ ತೆಗೆದುಕೊಳ್ಳುತ್ತದೆ. ಆದರೆ ಕಾಂಗ್ರೆಸ್ ನವರು ವಿರೋಧ ಪಕ್ಷ ಇದೆ ಎಂದು ತೋರಿಸಲು ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಕಾಸರಗೋಡು: ಮಗುಚಿ ಬಿದ್ದ ಮೀನುಗಾರಿಕೆಗೆ ತೆರಳಿದ್ದ ದೋಣಿ; ಮೂವರು ಮೀನುಗಾರರು ನಾಪತ್ತೆ

ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿ ವಿಚಾರವಾಗಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯವರಿಗೆ ಪಕ್ಷದಿಂದ ತೊಂದರೆಯಾಗಿಲ್ಲ. ಅದೊಂದು ಆಕಸ್ಮಿಕವಾಗಿ ನಡೆದ ಘಟನೆ. ನೈತಿಕವಾಗಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಕಾನೂನಾತ್ಮಕವಾಗಿ ಶಿಕ್ಷೆ ಆಗಲಾರದು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

Advertisement

ಕರಾವಳಿಗೆ ಅನುದಾನ ಕಡಿಮೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಕರಾವಳಿಗೆ ಸರಿಯಾಗಿ ಅನುದಾನ ಬರುತ್ತಿದೆ. ಬೃಹತ್ ನೀರಾವರಿ ಯೋಜನೆಗೆ ಇಲ್ಲಿ ಅವಕಾಶವಿಲ್ಲ. ಅದರ ಹಣವನ್ನು ಸಣ್ಣ ನೀರಾವರಿ ಯೋಜನೆಗಳಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಎತ್ತಿನಹೊಳೆ ಯೋಜನೆ ಪೂರ್ಣವಾಗಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ತುಮಕೂರು- ಚಿಕ್ಕಬಳ್ಳಾಪುರ ಜಮೀನು ಒತ್ತುವರಿ ಕೆಲಸವಾಗಿಲ್ಲ. ಕೆಲವು ತೊಡಕುಗಳಿವೆ. ಅದೆಲ್ಲವನ್ನೂ ಸರಿ ಪಡಿಸಲಾಗುತ್ತಿದೆ. ಎರಡು ವರ್ಷದಲ್ಲಿ ಕೆಲಸ ಮುಗಿಯುತ್ತದೆ ಎಂದರು. ಮೇಕೆದಾಟು ವಿಚಾರವಾಗಿ ಯಾವುದೇ ಅಭಿಪ್ರಾಯ ನೀಡಲು ಸಚಿವ ಮಾಧುಸ್ವಾಮಿ ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next