Advertisement

ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಐಟಿ ದಾಳಿ

08:20 PM Mar 03, 2021 | Team Udayavani |

ನವದೆಹಲಿ : ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ನಟಿ ತಾಪ್ಸಿ ಪನ್ನು ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಇತ್ತೀಚೆಗೆ ಈ ಇಬ್ಬರೂ ಸೆಲೆಬ್ರಿಟಿಗಳು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದು, ಇದೇ ಹಿನ್ನೆಲೆಯಲ್ಲಿ ಐಟಿ ದಾಳಿಯಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ರೈತರ ಪ್ರತಿಭಟನೆ ಪರವಾಗಿ ರಿಹಾನ್ನಾ ಮತ್ತು ಗ್ರೇಟಾ ಮಾತನಾಡಿದ್ದು, ಇದರ ವಿರುದ್ಧವಾಗಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರದಂತೆ ಬಾಲಿವುಡ್ ತಾರೆಯರು ಟ್ವೀಟ್ ಮಾಡಿದ್ದರು. ಆದ್ರೆ ತಾಪ್ಸಿ ಪನ್ನು ಮಾತ್ರ ರೈತ ಪ್ರತಿಭಟನೆ ಮತ್ತು ರಿಹಾನ್ನಾ ಪರವಾಗಿಯೇ ಮಾತನಾಡಿದ್ದರು.

ತಾಪ್ಸಿ, ಅನುರಾಗ್ ಕಶ್ಯಪ್ ಮಾತ್ರವಲ್ಲದೆ ನಿರ್ಮಾಪಕ ವಿಕಾಸ್ ಬಹ್ಲಾ ನಿವಾಸ ಸೇರಿದಂತೆ ಮುಂಬೈನ 30 ಕಡೆಗಳಲ್ಲಿ ಐಟಿ ದಾಳಿಯಾಗಿದೆ ಎಂದು ಹೇಳಲಾಗಿದೆ.

ಈ ಮೂವರು ಖ್ಯಾತ ನಾಮರು ಕಳೆದ ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಕೆಣಕಿದ್ದು, ಇದೇ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next