Advertisement

ಭಾರತ ವಿರೋಧಿ ಫ‌ಲಕ ಸ್ವೀಕಾರಾರ್ಹವಲ್ಲ: ಬಿಸಿಸಿಐ

01:34 AM Jul 08, 2019 | Sriram |

ಲೀಡ್ಸ್‌: ಭಾರತ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ‘ಕಾಶ್ಮೀರಕ್ಕೆ ನ್ಯಾಯಕೊಡಿ’ ಭಾರತ ವಿರೋಧಿ ಫ‌ಲಕವನ್ನು ಲಘು ವಿಮಾನದಿಂದ ಕ್ರೀಡಾಂಗಣದ ಕೆಳಕ್ಕೆ ಹಾರಿಸಿದ ಘಟನೆ ಕುರಿತಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಭಾರತ ವಿರೋಧಿ ಇಂತಹ ರಾಜಕೀಯ ಘೋಷಣೆಗಳು ಕಾಣಿಸಿಕೊಳ್ಳುವುದು ಸ್ವೀಕಾರಾರ್ಹವಾದುದಲ್ಲ ಘಟನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ತುಂಬಾ ನಿರಾಸೆಯಾಗಿದೆ. ಭಾರತ ಆಟಗಾರರ ರಕ್ಷಣೆ, ಭದ್ರತೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ)ಗೆ ಬಿಸಿಸಿಐ ಪತ್ರ ಬರೆದಿದೆ. ಈ ಕುರಿತಂತೆ ಮಾತನಾಡಿದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ‘ಹೆಡಿಂಗ್ಲಿನಲ್ಲಿ ನಡೆದಿರುವ ವಿಷಯದ ಬಗ್ಗೆ ನಮ್ಮ ಕಳವಳವನ್ನು ಐಸಿಸಿ ಎದುರು ವ್ಯಕ್ತಪಡಿಸಿದ್ದೇವೆ. ಭಾರತ ವಿರೋಧಿ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ. ಜತೆಗೆ ನಮ್ಮ ಆಟಗಾರರ ರಕ್ಷಣೆ ಹಾಗೂ ಭದ್ರತೆ ನಮಗೆ ಮುಖ್ಯ, ಇಂತಹ ಭಾರತ ವಿರೋಧಿ ಘೋಷಣೆಗಳು ಸೆಮಿಫೈನಲ್ನಲ್ಲೂ ಪುನರಾವರ್ತನೆಯಾದರೆ ತಕ್ಕುದಾಗಿರುವುದಿಲ್ಲ ಎನ್ನುವುದನ್ನು ಐಸಿಸಿಗೆ ಸ್ಪಷ್ಟಪಡಿಸಿದ್ದೇವೆ’ ಎಂದು ತಿಳಿಸಿದರು.

ಭಾರತ -ಶ್ರೀಲಂಕಾ ಪಂದ್ಯದ ನಡುವೆ ಮೂರು ಸಲ ಲಘು ವಿಮಾನವೊಂದು ಕಾಶ್ಮೀರ ವಿಚಾರದ ಕುರಿತ ಭಾರತ ವಿರೋಧಿ ಫ‌ಲಕವನ್ನು ಕ್ರೀಡಾಂಗಣದ ಕೆಳಕ್ಕೆ ಹಾರಿಸಿತ್ತು. ಇದನ್ನು ಸ್ವತಃ ಐಸಿಸಿಗೆ ಖಂಡಿಸಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next