Advertisement

Congress; ನಮ್ಮ ಪ್ರಶ್ನೆಗಳಿಗೆ ಇದೇ ವೇದಿಕೆಯಲ್ಲಿ ಉತ್ತರಿಸಿ: ಡಾ| ಜಿ. ಪರಮೇಶ್ವರ್‌

11:48 PM Aug 09, 2024 | Team Udayavani |

ಮೈಸೂರು: ಪ್ರತಿಭಟನೆ, ಪಾದಯಾತ್ರೆ ಮಾಡುವುದು ನಿಮ್ಮ ಹಕ್ಕು. ನಿಮ್ಮ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾವ ಕಾರಣಕ್ಕೆ ಹೋರಾಟ ಎಂಬುದನ್ನು ತಿಳಿಸಿ. ಸಿಎಂ ವಿರುದ್ಧ ಆರೋಪ ಮಾಡುವ ನಿಮ್ಮಲ್ಲಿ ದಾಖಲೆಗಳಿದ್ದರೆ ತೋರಿಸಿ. ನಮ್ಮ ಪ್ರಶ್ನೆಗಳಿಗೆ ಶನಿವಾರ ಇದೇ ವೇದಿಕೆಯಲ್ಲಿ ನೀವು ನಡೆಸುವ ಸಮಾವೇಶದಲ್ಲಿ ಉತ್ತರ ಕೊಡಿ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ವಿಪಕ್ಷಗಳನ್ನು ಪ್ರಶ್ನೆ ಮಾಡಿದರು.

Advertisement

ಪಕ್ಷದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಮೇಲೆ 25ಕ್ಕೂ ಹೆಚ್ಚು ಹಗರಣಗಳಿವೆ. ನಿಮ್ಮ ಕಾಲದಲ್ಲಿ ನಡೆದ ಪಿಎಸ್‌ಐ ಹಗರಣದಿಂದಾಗಿ ಇಲ್ಲಿವರೆಗೂ ಪೊಲೀಸ್‌ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಆಗುತ್ತಿಲ್ಲ. ಅಷ್ಟೂ ಗೊಂದಲದ ಗೂಡು ಮಾಡಿಬಿಟ್ಟಿರುವಿರಿ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next