Advertisement

ಯೋಧರ ಹತ್ಯೆಗೆ ಪ್ರತೀಕಾರ!

06:00 AM Sep 30, 2018 | Team Udayavani |

ಹೊಸದಿಲ್ಲಿ: ಸರ್ಜಿಕಲ್‌ ದಾಳಿಯ 2 ವರ್ಷಗಳ ಸಂಭ್ರಮಾಚರಣೆ ಆರಂಭ ದಿನದಂದೇ ಗಡಿಯಲ್ಲಿ ಮತ್ತೂಂದು ಸರ್ಜಿಕಲ್‌ ದಾಳಿ ನಡೆಸಲಾಗಿದೆಯೇ? ಈ ಅನುಮಾನ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆಯಿಂದ ಹುಟ್ಟಿದೆ. ಕೆಲವು ದಿನಗಳ ಹಿಂದೆ ಗಡಿಯಲ್ಲಿ ನಡೆದ ಭಾರತದ ಯೋಧನ ಅಮಾನವೀಯ ಹತ್ಯೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಏನೋ ಮಾಡಿದ್ದೇವೆ, ಹೇಳುವುದಿಲ್ಲ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಅಷ್ಟೇ ಅಲ್ಲ, ಬಿಎಸ್‌ಎಫ್ ಪ್ರಧಾನ ನಿರ್ದೇಶಕ ಕೆ.ಕೆ. ಶರ್ಮಾ ಕೂಡ, ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆಯಲ್ಲಿ ಸೂಕ್ತ ಕ್ರಮ ಕೈಗೊಂಡಿ ದ್ದೇವೆ ಎಂದಿದ್ದಾರೆ. ನಮ್ಮ ಪ್ರತಿಕ್ರಿಯೆ ಅವರಿಗೆ ಭಾರೀ ಪ್ರಮಾಣದ ಹಾನಿ ಮಾಡಿದೆ. ನಾವು ಇದನ್ನು ಮಾಡುತ್ತಲೇ ಇರುತ್ತೇವೆ ಎಂದೂ ಎಚ್ಚರಿಸಿದ್ದಾರೆ.  ನರೇಂದ್ರ ಸಿಂಗ್‌ ಹತ್ಯೆಗೈದ ದಿನ ಗಡಿಯಲ್ಲಿ ಪಾಕ್‌ ಪ್ರದೇಶ ಸ್ಥಳಾಂತರ ಮಾಡಲಾಗಿತ್ತು. ನಾವು ಪ್ರತಿದಾಳಿ ನಡೆಸುತ್ತೇವೆ ಎಂಬುದೇ ಇದಕ್ಕೆ ಕಾರಣ. ನಾವು ಆಗಲೇ ಪ್ರತಿದಾಳಿ ನಡೆಸಿದ್ದರೆ ಪ್ರಯೋಜನ ಇರುತ್ತಿರಲಿಲ್ಲ ಎಂದೂ ಅವರು ಹೇಳಿದ್ದಾರೆ.

ರಾಜನಾಥ್‌ ಹೇಳಿದ್ದೇನು?
ಪ್ರತೀಕಾರವಾಗಿ ಏನೋ ಮಾಡಿ ದ್ದೇವೆ. ನಾನು ಹೇಳುವುದಿಲ್ಲ. ಹೇಳುವಂತೆಯೂ ಇಲ್ಲ. 2-3 ದಿನದ ಹಿಂದೆ ತಕ್ಕ ಪಾಠ ಕಲಿಸಿದ್ದೇವೆ. ಮುಂದೆಯೂ ನೋಡಿ, ಏನಾಗುತ್ತದೆ ಎಂದು…

Advertisement

Udayavani is now on Telegram. Click here to join our channel and stay updated with the latest news.

Next