Advertisement

ಮತ್ತೋರ್ವನಿಗೆ ಮಂಗನ ಕಾಯಿಲೆ

09:56 PM Apr 25, 2020 | Sriram |

ಸಾಗರ: ತಾಲೂಕಿನ ತುಮರಿಯ ಹೆಸ್ಸಿಗೆಯ ಗಣಪತಿ ನಾಯ್ಕ(35) ಅವರಿಗೆ ಮಂಗನ ಕಾಯಿಲೆಯ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Advertisement

ಈ ನಡುವೆ ಒಡಂಬೈಲು ಹೆನ್ನಿಯ ಮಾರುತಿ ಎಂಬುವವರನ್ನು ಕೂಡ ಶಂಕಿತ ಕೆಎಫ್‌ಡಿ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರ ರಕ್ತ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ ಎಂದು ತಾಲೂಕು ವೈದ್ಯಾ ಧಿಕಾರಿ ಡಾ| ಮೋಹನ್‌ ಕೆ.ಎಸ್‌. ತಿಳಿಸಿದ್ದಾರೆ.

ಶಿವಮೊಗ್ಗದ ಪರಿಮಾಣ ಕ್ರಿಮಿ ಪರಿಶೋಧನಾ ಪ್ರಯೋಗಾಲಯ ಗುರುವಾರ ನಡೆಸಿದ 40 ಪರೀಕ್ಷೆಯಲ್ಲಿ ಇನ್ನೂ ನಾಲ್ಕು ಪ್ರಕರಣಗಳಲ್ಲಿ ಮಂಗನ ಕಾಯಿಲೆ ಖಚಿತಗೊಂಡಿದೆ. ಚಿಕ್ಕಮಗಳೂರಿನ ಎನ್‌.ಆರ್‌. ಪುರದ ದಬಗಣಿಯ ಸುನಿತಾ ಮಂಜುನಾಥ್‌ (31), ತೀರ್ಥಹಳ್ಳಿಯ ಮಾಳೂರು ಬೆಳುವೆಯ ಪವಿತ್ರಾ ಮಂಜುನಾಥ್‌ (25), ಉತ್ತರ ಕನ್ನಡ ಸಿದ್ದಾಪುರದ ಕಾನ್ಸೂರಿನ ಸಮೀಪದ ನಾಣಿಕಟ್ಟಾದ ಶೇಖರ್‌ ಗಣಪತಿ ನಾಯ್ಕ (40), ಕ್ಯಾದಗಿಯ ಸನ್ನೆಕೊಪ್ಪದ ಪುನೀತ್‌ ವೀರಭದ್ರ ನಾಯ್ಕ (8) ಅವರಿಗೆ ಕೆಎಫ್‌ಡಿ ಸೋಂಕು ತಗಲಿರುವುದು ಖಚಿತಪಟ್ಟಿದೆ. ಸಾಗರ ತಾಲೂಕಿನ ಕಾರ್ಗಲ್‌ನ 5, ತುಮರಿಯ 4 ಮತ್ತು ಅರಳಗೋಡಿನ ಒಂದು ಶಂಕಿತ ಜ್ವರದ ಪ್ರಕರಣಗಳ ರಕ್ತದ ಸ್ಯಾಂಪಲ್‌ನ್ನು ವಿಡಿಎಲ್‌ಗೆ ರವಾನಿಸಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next