Advertisement

ಮಂಗನ ಕಾಯಿಲೆಗೆ ಮತ್ತೊಂದು ಬಲಿ?

12:39 AM Feb 08, 2019 | |

ಸಾಗರ: ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವಾಟೆಮಕ್ಕಿಯ ಕೃಷ್ಣಪ್ಪ (50) ಎಂಬುವರು ಶಂಕಿತ ಮಂಗನ ಕಾಯಿಲೆಗೆ ತುತ್ತಾಗಿ ಗುರುವಾರ ಕೊನೆಯುಸಿರೆಳೆದಿದ್ದಾರೆ.

Advertisement

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕೃಷ್ಣಪ್ಪ, ಬುಧವಾರ ಅರಳಗೋಡು ಪಿಎಚ್ಸಿಗೆ ಪರೀಕ್ಷೆಗೆಂದು ಬಂದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ನ ಕೆಎಂಸಿಗೆ ಶಿಫಾರಸು ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಮಣಿಪಾಲ್‌ಗೆ ಕರೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಆದರೆ, ಕಾಯಿಲೆ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಮಾರ್ಗಮಧ್ಯದಲ್ಲೇ ಕೊನೆಯುಸಿ ರೆಳೆದಿದ್ದಾರೆ.

ಮುಂದುವರಿದ ಮಂಗಗಳ ಸಾವು: ಈ ಮಧ್ಯೆ, ಸಾಗರದ ಬಿ.ಎಚ್.ರಸ್ತೆಯ ತ್ಯಾಗರ್ತಿ ಕ್ರಾಸ್‌ ಸಮೀಪ ಬಷೀರ್‌ ಲೇಔಟ್ ಸಮೀಪ ಕೊಳೆತ ಮಂಗದ ಶವವೊಂದು ಗುರುವಾರ ಕಂಡು ಬಂದಿದೆ. ನಗರಸಭೆ, ಅರಣ್ಯ, ಆರೋಗ್ಯ ಹಾಗೂ ಪಶು ಇಲಾಖೆ ಅಧಿಕಾರಿಗಳು ಅದನ್ನು ಸುಟ್ಟು ರಕ್ಷಣಾ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೃದಯ ಭಾಗದಲ್ಲಿರುವ ಧನಲಕ್ಷ್ಮೀ ನಿಲಯದ ಹಿಂಭಾಗ ಅನಂತ ಕಾಮತ್‌ ಅವರ ತೋಟದಲ್ಲಿ ಎರಡು ಮಂಗಗಳು ಮೃತಪಟ್ಟಿವೆ. ಗುರುವಾರ ಕಳಸ ದೇವಸ್ಥಾನ ಸಮೀಪ ಇನ್ನೊಂದು ಮಂಗ ಸತ್ತಿದೆ. ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪಶು ಆಸ್ಪತ್ರೆ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ವೈದ್ಯರು ಮಂಗಗಳ ಕಳೆಬರಹದ ಮರಣೋತ್ತರ ಪರೀಕ್ಷೆ ನಡೆಸಿ ರಕ್ತದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next