Advertisement

ತುಳುಕೂಟ ಐರೋಲಿಯ ವತಿಯಿಂದ ವಾರ್ಷಿಕ ವಿಹಾರಕೂಟ

12:44 PM Dec 07, 2018 | Team Udayavani |

ನವಿಮುಂಬಯಿ: ತುಳುಕೂಟ ಐರೋಲಿಯ ವತಿಯಿಂದ ವಾರ್ಷಿಕ ವಿಹಾರಕೂಟವು ಡಿ. 2ರಂದು ಬದ್ಲಾಪುರದ ಹಾರ್ಮೋನಿ ವಿಲೇಜ್‌ ರೆಸಾರ್ಟ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

 ತುಳುಕೂಟ ಐರೋಲಿಯ ವಿಹಾರಕೂಟ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಎ. ರೈ ಅವರ ಮುಂದಾಳತ್ವದಲ್ಲಿ ನಡೆದ ವಿಹಾರ ಕೂಟದಲ್ಲಿ ತುಳುಕೂಟ ಐರೋಲಿಯ ಅಧ್ಯಕ್ಷ ಕೆ. ಕೆ. ಹೆಬ್ಟಾರ್‌, ಉಪಾಧ್ಯಕ್ಷರಾದ ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಅಮರನಾಥ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ಕೃಷ್ಣ ವಿ. ಶೆಟ್ಟಿ, ಕೋಶಾಧಿಕಾರಿ ಉದಯ ಎನ್‌. ಶೆಟ್ಟಿ, ಮಾಜಿ ಅಧ್ಯಕ್ಷರಾದ ಲ್ಯಾನ್ಸಿ ಡಿಕುನ್ಹಾ, ಪ್ರಕಾಶ್‌ ಆಳ್ವ, ಜಗದೀಶ್‌ ಶೆಟ್ಟಿ ನಾಡಾಜೆಗುತ್ತು, ಹರೀಶ್‌ ಶೆಟ್ಟಿ ಪಡುಬಿದ್ರಿ ಹಾಗೂ ಇತರ ಪದಾಧಿಕಾರಿಗಳಾದ ಗಂಗಾಧರ ಬಂಗೇರ ಬಂಟ್ವಾಳ, ಅನಿಲ್‌ ಶೆಟ್ಟಿ ಪಾಂಗಾಳ, ಬಾಲಕೃಷ್ಣ ಶೆಟ್ಟಿ ಕಟೀಲು ಮೊದಲಾದವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಹಿಳೆಯರು, ಮಕ್ಕಳು, ಸದಸ್ಯ ಬಾಂಧವರು ಸೇರಿದಂತೆ ನೂರಾರು ಮಂದಿ ವಿಹಾರಕೂಟದಲ್ಲಿ ಪಾಲ್ಗೊಂಡಿದ್ದರು. 

ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next