Advertisement

ಅನ್ನಂ ಪರಬ್ರಹ್ಮ ಸ್ವರೂಪ: ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

06:03 PM Sep 04, 2017 | Team Udayavani |

ಹಿಂದೆ “ರೋಷಾಗ್ನಿ’, “ಬಿಡಲ್ಲ’ ಎಂಬ ಎರಡು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟನೆಯನ್ನು ಮಾಡಿದ್ದ ಕರಾಟೆಯಲ್ಲಿ ಬ್ಲ್ಯಾಕ್‌ ಬೆಲ್ಟ್ ಪಡೆದಿರುವ ರಾಜವೀರ್‌ ಅವರ ಮೂರನೇ ಚಿತ್ರ “ಅನ್ನಂ ಪರಬ್ರಹ್ಮ ಸ್ವರೂಪ’. ಪ್ರಸ್ತುತ ಈ ಚಿತ್ರಕ್ಕೆ ಬೆಂಗಳೂರಿನ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ರೈತನ ಸದ್ಯದ ಪರಿಸ್ಥಿತಿಯ ಮೇಲೆ ಹೆಣೆಯಲಾಗಿರುವ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ರಾಜವೀರ್‌ ಅವರೆ ನಿರ್ದೇಶಿಸಿದ್ದಾರೆ.

Advertisement

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ರಾಜವೀರ್‌ ಸಾಹಸ ನಿರ್ದೇಶನವನ್ನು ಮಾಡಿದ್ದಾರೆ. ರಾಜವೀರ್‌ ಅವರ ಮಗ ಸೂರ್ಯರಾಜ್‌ ಚಿತ್ರಕ್ಕೆ ಸಂಗೀತ ನೀಡುವುದರೊಂದಿಗೆ ಛಾಯಾಗ್ರಹಣವನ್ನು ಮಾಡಿದ್ದಾರೆ. ರಾಜವೀರ್‌, ಸಿದ್ದರಾಮ, ನಾಗಣ್ಣ ಮಾಸ್ಟರ್‌,
ದೀಪು, ನಿರ್ಮಸಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next